ಬೆಂಗಳೂರು: ಹೈಕಮಾಂಡ್ ರಾಜೀನಾಮೆ ಕೇಳಿದರೆ ತಕ್ಷಣ ನಾನು ಕೊಡುತ್ತೆನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು ಇದೀಗ ಬಿಜೆಪಿಯಲ್ಲಿ ಸಂಚಲನ ಮೂಢಿಸಿದೆ.
ರಾಜ್ಯ ಬಿಜೆಪಿಯಲ್ಲಿ ಧಗ ಧಗ ಧಗೆ ಕಾಣಿಸಿಕೊಂಡಿದೆ. ಈ ಯಡಿಯೂರಪ್ಪ ನ ಮೇಲೆ ಕೇಂದ್ರದ ನಾಯಕರು ವಿಶ್ವಾಸವಿಟ್ಟಿದ್ದಾರೆ. ಅವರು ಹೇಳುವವರೆಗೂ ನಾನು ಮುಂದುವರೆಯುತ್ತೆನೆ. ಅವರು ಕೇಳಿದ ತಕ್ಷಣೆವೇ ರಾಜೀನಾಮೆ ನೀಡುತ್ತೇನೆ. ನನಗೆ ಪರ್ಯಾಯ ನಾಯಕರು ಇದ್ದಾರೆ. ದೇಶದಲ್ಲಿ ರಾಜ್ಯದಲ್ಲಿ ಪರ್ಯಾಯ ನಾಯಕರಿದ್ದಾರೆ. ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಬರುತ್ತಾರೆ ಎಂದು ಹೇಳಿದ್ದಾರೆ. ಇಷ್ಟು ದಿನಗಳು ಸೈನಿಕ ಸಿಪಿ ಯೋಗೀಶ್ವರ್ ನಮ್ಮ ನಾಯಕ ಯಡಿಯೂರಪ್ಪ ಅವರೇ ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದರೆ, ಇನ್ನು ಆರೋಗ್ಯ ಸಚಿವ ಸುಧಾಕರ್ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದು, ಯಡಿಯೂರಪ್ಪ ಅವರು ಬಿಜೆಪಿಯ ನಾಯಕರು ಅವರು ಸಿಎಂ ಆಗಬೇಕು ಎಂದು ಕಾಂಗ್ರೆಸ್ ಬಿಟ್ಟು ಬಂದಿದ್ದೇವೆ. ಅವರೇ ನಮ್ಮ ನಾಯಕರು ಎಂದು ಹೇಳಿದ್ದಾರೆ. ಇನ್ನೂ ಹಿರಿಯ ನಾಯಕ ಹೆಚ್. ವಿಶ್ವನಾಥ್ ಅವರು ಯಡಿಯೂರಪ್ಪ ಅವರ ರಾಜೀನಾಮೆಗೆ ಪ್ರತಿಕ್ರಿಯೆ ನೀಡುತ್ತಾ, ಕ್ಯಾಪ್ಟನ್ ಬದಲಾದರೆ ಆಟಗಾರರು ಕೂಡ ಬದಲಾಗಬೇಕು ಎಂದು ಹೇಳಿದ್ದಾರೆ.
ಸಂಯುಕ್ತವಾಣಿ