ನಲವತ್ತು ವರ್ಷಗಳು ನಮ್ಮನ್ನು ಮತಕ್ಕಾಗಿ ಬಳಸಿಕೊಂಡಿದ್ದರು ಈ ಬಾರಿ ಅಭಿವೃದ್ದಿಗಾಗಿ ಬಿಜೆಪಿಗೆ ಮತ ಹಾಕಿ

ರಾಜಕೀಯ

ಸಿಎಂ ಬಸವರಾಜ್ ಬೊಮ್ಮಾಯಿಯವರ ಮುಖ ನೋಡಿ ಅಭಿವೃದ್ಧಿ ಗಾಗಿ ನೀವು ಶಿವರಾಜ್ ಸಜ್ಜನ್ ಅವರಿಗೆ ಹೆಚ್ಚಿನ ಮತ ಹಾಕಿಸಿ ಗೆಲ್ಲಿಸಬೇಕು ಎಂದು ಹೊಸದುರ್ಗ ಶಾಸಕ ಗೂಳಿ ಹಟ್ಟಿ ಡಿ.‌ಶೇಖರ್ ಹೇಳಿದರು.
ಅವರು ಹಾವೇರಿಯ ಹಾನಗಲ್ ಉಪ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು,
ನಾವು ನಮ್ಮ ಪ್ರದೇಶ ಅಭಿವೃದ್ದಿಯಾಗಬೇಕು ಎಂದರೆ ಅದು ಸರ್ಕಾರದಿಂದ ಮಾತ್ರ ಸಾಧ್ಯ ಆದ್ದರಿಂದ ಈಗ ನಡೆಯಿತ್ತಿರುವ ಉಪ ಚುನಾವಣೆಯಲ್ಲಿ ಶೇಕಡ 80 ರಷ್ಟು ಮತಗಳನ್ನು ಹಾಕಿಸಬೇಕು. ಇದೇ ಜಿಲ್ಲೆಯವರದಾ ಸಿಎಂ ಬಸವರಾಜ ಬೊಮ್ಮಾಯಿ ಅವರ ಮುಖ ನೋಡಿಕೊಂಡು ಶಿವರಾಜ್ ಸಜ್ಜನ್ ಅವರ‌ನ್ನು ಗೆಲ್ಲಿಸಬೇಕು, ಇದರಿಂದ ಹಾವೇರಿಯ ಹಾನಗಲ್ ಕ್ಷೇತ್ರದ ಅಭಿವೃದ್ಧಿ ಗೆ ಕಾರಣರಾಗಬೇಕು. ಸಿಎಂ ಬೊಮ್ಮಾಯಿ ಅವರ ಕನಸು ನನಸಾಗಬೇಕು ಅದರಂತೆ ನಿಮ್ಮ ಅಭಿವೃದ್ಧಿ ಯ ಕನಸು ನನಸಾಗುತ್ತದೆ ಎಂದರು.Chitradurga goolihatty campgain

 

 

 

Leave a Reply

Your email address will not be published. Required fields are marked *