Chitradurga if u lisson congress speech u WL died

ಬಿಜೆಪಿ ಮಾತು‌ಕೇಳಿದರೆ ಜೀವ ಉಳಿಯುತ್ತದೆ ಕಾಂಗ್ರೆಸ್ ಮಾತು‌ಕೇಳಿದರೆ ಸಾಯುತ್ತಿರಾ: ಸಚಿವ ಶ್ರೀರಾಮುಲು

ಜಿಲ್ಲಾ ಸುದ್ದಿ ರಾಜಕೀಯ

ಚಿತ್ರದುರ್ಗ:ಕಾಂಗ್ರೆಸ್ ಮಾತನ್ನು ಕೇಳಿದರೆ ಜೀವ ಹೋಗುತ್ತದೆ ಬಿಜೆಪಿ ಮಾತು ಕೇಳಿದರೆ ಜೀವ ಉಳಿಯುತ್ತವೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಜನತೆಯಲ್ಲಿ ಮನವಿ ಮಾಡುವ‌ ಮೂಲಕ‌ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.

Chitradurga if u lisson  congress  speech u WL died

 

 

 

ಚಿತ್ರದುರ್ಗದ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಉದ್ಘಾಟಿಸಿ ಅವರು ಮಾಧ್ಹಮಗಳೊಂದಿಗೆ‌ಮಾತನಾಡಿದರು.ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಅವರು ಅಧಿಕಾರ ಕಳೆದುಕೊಂಡಿದ್ದಾರೆ ಇದರಿಂದ ಮನ ಬಂದಂತೆ ಮಾತನಾಡುತ್ತಿದ್ದಾರೆ.ಕಾಂಗ್ರೆಸ್ ನವರಲ್ಲಿ ನಾನು ಮನವಿ‌..ಮಾಡುತ್ತೇನೆ ಜನರ ಜೀವ ದ ಜೊತೆ ರಾಜಕಾರಣ ಮಾಡಬೇಡಿ. ನಿಮಗೆ ಇದು ಶೋಭೆ ತರುವಂತದ್ದಲ್ಲ. ಇನ್ನು ಮಲ್ಲೇಶ್ವರಂ ನಲ್ಲಿ ವ್ಯಾಕ್ಸಿನ್ ಹಾಕಲು ಜಾತಿ ತಾರತಮ್ಯ ಮಾಡಿರುವ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಅವರು ಕ್ರಮ ತೆಗೆದುಕೊಂಡಿದ್ದಾರೆ. ಇನ್ನು ವ್ಯಾಕ್ಸಿನ್ ವಿಚಾರದಲ್ಲಿ ಯಾವುದೇ ಜಾತಿ ಧರ್ಮ ಲಿಂಗದ ತಾರತಮ್ಯವಿಲ್ಲ‌. ಬ್ಲಾಕ್ ಫಂಗಸ್ ಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಹತ್ರ ಮಾತನಾಡಿ‌ ನಿರ್ಧಾರಕ್ಕೆ ಬರುತ್ತೇನೆ. ಬಿಕೆ ಹರಿಪ್ರಸಾಸ್ ಅವರು ತಮ್ಮ ಬುದ್ದಿಯನ್ನು ಒಳ್ಳೆತನಕ್ಕೆ ಬಳಸಬೇಕು. ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಿಮ್ಮ ಬುದ್ದಿವಂತಿಕೆಯನ್ನು ಬೇರೆಡೆ ಉಪಯೋಗಿಸಿ ಇಲ್ಲಿ ಬೇಡ. ಕೇಂದ್ರದಬಮುಖಮನಡರು ಸಿಎಂ ಬದಲಾವಣೆ ಇಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದೆ. ಯಾರೋ ಸಣ್ಣ ಜನ ಹೋಗಿ ಬಂದಿದ್ದಾರೆ ಅದಕ್ಕೆ ತಲೆಕೆಡಿಸಿಕೊಳ್ಳೊದು ಬೇಡ ಇನ್ನು ಲಾಕ್ ಡೌನ್ ನನ್ನು ಕೂಡ ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತದೆ. ಸಂಪುಟದ ಬದಲಾವಣೆಯು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *