ಚಿತ್ರದುರ್ಗ: ಎರಡು ಕಾಡುಗಳ ನಡುವೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು,8 ಜನರು ತೀವ್ಎ ಗಾಯಗೊಂಡಿರುವ ಘಟನೆ ಮೊಳಕಾಲ್ಮೂರು ಸಮೀಪ ನಡೆದಿದೆ.

ಬಳ್ಳಾರಿ ಮಾರಮ್ಮನ ದೇವಿ ದರ್ಶನಕ್ಕೆಂದು ತೆರಳಿದ್ದ ಕಾರು ಹಾಗೂ ಶ್ರೀ ಶೈಲದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರುಗಳ ನಡುವೆ ಮೊಳಕಾಲ್ಮೂರಿನ ಕೊಮ್ಮನಪಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150(A) ರಲ್ಲಿ ಕಾರುಗಳು ಪರಸ್ಪರ ಡಿಕ್ಕಿ ಆಗಿವೆ. ಚಿತ್ರದುರ್ಗದಿಂದ ಬಳ್ಳಾರಿ ಮಾರಮ್ಮನ ದೇವಸ್ಥಾನಕ್ಕೆ ಹೋಗುತ್ತಿದ್ದ ಚಿತ್ರದುರ್ಗ ನಗರದ ಧವಳಗಿರಿ ಬಡಾವಣೆಯ (ಬುರುಜನಹಟ್ಟಿ) ಎಸ್ ಬಿ ಎಲ್ ಬಸ್ ಮಾಲೀಕ ಮಹೇಂದ್ರ ಸ್ಥಳದಲ್ಲಿಯೇ ಮೃತಪಟ್ಟರೆ ಕಾರಿನಲ್ಲಿದ್ದ ನಾಲ್ಕುಜನರು ತೀವ್ರ ಗಾಯಗೊಂಡಿದ್ದು, ಶ್ರೀ ಶೈಲದಿಂದ ವಾಪಾಸ್ಸು ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಾರಿನಲ್ಲಿದ್ದ ಅನೇಕಲ್ ತಾಲೂಕು ಜಿಗಣಿ ಮೂಲದ ವನಜಾಕ್ಷಿ (36) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಎರಡು ಕಾರಿನಲ್ಲಿದ್ದ ಒಟ್ಟು ಎಂಟು ಜನರು ಗಾಯಗೊಂಡಿದ್ದು ಅವರನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಯುಕ್ತವಾಣಿ





