Chitradurga full un lock from tomorrow

ಮೋಜು ಜೂಜಿಗೆ ಬಿದ್ದವರು ಮಾಡಿದ್ದೇನು ?

ಕ್ರೈಂ

ಚಿತ್ರದುರ್ಗ:ಸರಗಳ್ಳತನ ಮಾಡಿ ನಗರದಲ್ಲಿ ಭಯ ಹುಟ್ಟಿಸಿದ್ದ ಮೂವರು ಸರಗಳ್ಳರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Chitradurga chain snachars  arrestChitradurga chain snachars  arrest

ಒಂದು ತಿಂಗಳಿನಿಂದ ಸರಗಳ್ಳರನ್ನು ಹಿಡಿಯಲು ಪೋಲಿಸ್ ಇಲಾಖೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳ ಶ್ರಮದಿಂದಾಗಿ ಮೂರು ಜನ ಸರಗಳ್ಳರನ್ನು ಹಿಡಿದಿದ್ದು ಅವರಿಂದ ಸುಮಾರು 200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮೂವರಲ್ಲಿ ಮೊದಲನೆ ಆರೋಪಿ ಉದಯ್, ಇವನಿಗೆ ಸಹಾಯ ಮಾಡುತ್ತಿದ್ದ ಕೀರ್ತಿ ಮತ್ತು ಉಮೇಶ್ ಇವರೆಲ್ಲರೂ ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದವರು ಎಂದು ಗುರುತಿಸಲಾಗಿದೆ.

 

 

 

ಸರಗಳ್ಳತನಕ್ಕೆ ಇಳಿಯಲು ಕಾರಣ: ಉದಯ್ ಶ್ರೀಮಂತ ಕುಟುಂಬದಲ್ಲಿ ಜನಸಿದ್ದು, ಮೋಜಿನ ಜೀವನ ನಡಡೆಸುತ್ತಿದ್ದ, ಜೂಜಾಟ ಆಡುತ್ತಿದ್ದ ಜೂಜಾಟ ಆಡಲು ಹಣವಿಲ್ಲದಾಗ ಯೂ ಟ್ಯೂಬ್ ನಲ್ಲಿ ಸರಗಳ್ಳತನ ಮಾಡುವುದನ್ನು ನೋಡಿ ಅದರಿಂದ ಪ್ರೇರೇಪಿತನಾಗಿ ಸರಗಳ್ಳತನ ಮಾಡಲು ಆರಂಭಿಸಿದ್ದ ಮೊದಲಿಗೆ ಯಶ ಕಾಣದ ಇವನು ನಂತರ ಇನ್ನಿಬ್ಬರು ಸ್ನೇಹಿತರನ್ನು ಜೊತೆ ಹಾಕಿಕೊಂಡು ಕಳವು ಮಾಡಲು ಆರಂಭಿಸಿದ್ದ ಇದಕ್ಕಾಗಿ ಪಲ್ಸರ್ ಬೈಕ್ ನ್ನು ಉಪಯೋಗಿಸುತ್ತಿದ್ದರು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಹೇಳಿದ್ದಾರೆ.

ಸಂಯುಕ್ತವಾಣಿ

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ

8660934503

Leave a Reply

Your email address will not be published. Required fields are marked *