ಚಿತ್ರದುರ್ಗ, ಜೂನ್19(ಹಿಸ)- ಕೋರೋನಾ ಎರಡನೆ ಅಲೆ ಬಗ್ಗೆ ತಜ್ಞರ ಸಲಹೆ ಮೀರಿದ್ದರಿಂದ ಎಂತಹ ಕಷ್ಟಗಳನ್ನು ಸ್ವತಃ ಅನುಭವಿಸಿದ್ದೇವೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ ಹೇಳಿದರು.

ಅವರು ಹೊಳಲ್ಕೆರೆಯಲ್ಲಿ ಪೌರ ನೌಕರರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದರು,
ಕೋರೋನಾ ಎರಡನೆ ಅಲೆಯ ಸಂಕಷ್ಟದಲ್ಲಿ ಸಮಯದಲ್ಲಿ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಅವರು ಆಟೋ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಆಹಾರದ ಕಿಟ್ ಗಳು ಹಾಗೂ ಎರಡು ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಅವರಿಗೆ ಎರಡು ಬಾರಿ ಕೋರೋನಾ ಸೋಂಕು ಕಂಡು ಬಂದರೂ ಕೂಡ ಅದನ್ನು ಲೆಕ್ಕಿಸದೆ ಎರಡೇ ದಿನಗಳಲ್ಲಿ ಹೊರಗೆ ಬಂದು ಜನರ ನೆರವಿಗೆ ಬಂದಿದ್ದಾರೆ. ಎರಡು ಬಾರಿ ಪ್ಯಾಕೇಜ್ ಗಳನ್ನು ಘೋಷಿಸಿದ್ದಾರೆ. ಹೊಳಲ್ಕೆರೆ ಕ್ಷೇತ್ರದಲ್ಲಿ ಸುಮಾರು 8 ಸಾವಿರ ಜನರು ನೋಂದಾಣಿಯಾಗಿದ್ದಾರೆ. ಅವರ ಖಾತೆಗೆ ಮೂರು ಸಾವಿರದಂತೆ ಜಮೆಯಾಗಲಿದೆ. ಇದರ ಜೊತೆಗೆ ಯಾರ್ಯಾರು ಕಟ್ಟಡ ಕಾರ್ಮಿಕರು ಪೇಂಟ್ ಕೆಲಸ ಮಾಡುವವರು ಇದ್ದಾರೆ ಅವರೆಲ್ಲರಿಗೂ ಉಪಕರಣಗಳ ಕಿಟ್ ಕೂಡ ನೀಡಿದ್ದಾರೆ. ಇನ್ನು ಪ್ರಧಾನಿ ಮೋದಿಯವರು ದೇಶದ ಪ್ರತಿ ಬಡವರಿಗೆ ದೀಪಾವಳಿಯವರೆಗೂ ಉಚಿತ ಅಕ್ಕಿಯನ್ನು ನೀಡಿದ್ದಾರೆ.ಇಷ್ಟೆ ಅಲ್ಲದೆ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಬೇಕು ಎನ್ನುವ ಕಾರಣಕ್ಕೆ ಉಚಿತವಾಗಿ ಕೊಡುತ್ತಿದ್ದಾರೆ ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಇದು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದರು.
ಸಂಯುಕ್ತವಾಣಿ
ಸುದ್ದಿಗಳು ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8660924503





