ಬೆಂಗಳೂರು: ನನಗೆ ಯುವರಾಜ್ ಅವರ ಅಕೌಂಟ್ ನಿಂದ ನನ್ನ ಅಕೌಂಟ್ ಗೆ ಸಿನಿಮಾ ಮಾಡಲು 15 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದರು ಅದು ಬಿಟ್ಟು ಒಂದು ಕಾಲು ಕೋಟಿ ವರ್ಗಾವಣೆಯಾಗಿದೆ ಎನ್ನುವುದು ಸುಳ್ಳು ಎಂದು ನಟಿ ರಾಧಿಕಾ ಕುಮಾರಸ್ಚಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಯುವರಾಜ್ ಅವರದ್ದೇ ಬ್ಯಾನರ್ ಅಡಿಯಲ್ಲಿ ಐತಿಹಾಸಿಕ ಸಿನಿಮಾ ಮಾಡುವ ವಿಷಯಕ್ಕೆ ನನಗೆ 15 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬೇರೆ ನಿರ್ಮಾಕರಿಂದ 60 ಲಕ್ಷ ಪಡೆದಿದ್ದೇನೆ. ಇದರ ಬಗ್ಗೆ ಯಾವುದೇ ಕಾರಾರು ಪತ್ರವನ್ನು ಮಾಡಿಕೊಂಡಿಲ್ಲ. ಯುವರಾಜ್ ಅವರು ನಮ್ಮ ಫ್ಯಾಮಿಲಿ ಫ್ರಂಡ್ ಹಾಗೂ ಜ್ಯೋತಿಷಿಗಳಾಗಿದ್ದರು. ನಮ್ಮ ಹಾಗೂ ಯುವರಾಜ್ ಮಧ್ಯೆ ಸಿನಿಮಾ ವಿಚಾರಕ್ಕೆ ಅಷ್ಟೆ ಮಾತುಕತೆ ಮಾಡಿದ್ದು, ಅದು ಬಿಟ್ಟು ಬೇರೆ ಯಾವುದೇ ವ್ಯವಹಾರವೂ ಇಲ್ಲ. ನಮ್ಮ ಅಣ್ಣನಿಗೂ ಹಾಗೂ ಯುವರಾಜ್ ಗೂ ಸಂಬಂಧವಿಲ್ಲ. ಸಿನಿಮಾ ಬಗ್ಗೆ ಅಷ್ಟೆ ಮಾತನಾಡಿದ್ದೆನೆ. ನಾನು ಬೇರೆ ಯಾವುದೆ ವಿಷಯವನ್ನು ಮಾತನಾಡಿಲ್ಲ. ನಾನು ಯಾರಿಗೂ ಮೋಸ ಮಾಡೋದು ವಂಚನೆ ಮಾಡೋ ವಿಷಯದಲ್ಲಿ ನಾನಿಲ್ಲ. ನನಗೆ ಡಿಸೆಂಬರ್ ನಲ್ಲಿ ಟೈಂ ಸರಿ ಇಲ್ಲ ಎಂದು ಹೇಳಿದ್ದರು. ಅದು ಇದೆ ಎಂದು ಅನಿಸುತ್ತದೆ. ಜೀವನದಲ್ಲಿ ನಮಗೆ ಮೋಸ ಆಗಿದೆಯೇ ಹೊರೆತು ನಾವು ಮೋಸ ಮಾಡಿಲ್ಲ . ಅವರು ಅರೆಸ್ಟ್ ಆಗಿದಾರೆ ಎಂದು ಗೊತ್ತಾದಾಗ ನನಗೂ ಶಾಕ್ ಆಯ್ತು.ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಸಂಯುಕ್ತವಾಣಿ