ಕಾಂಗ್ರೆಸ್ ವಿರುದ್ಧ ಹರಿ ಹಾಯ್ದ ಮೋದಿ

ಜಿಲ್ಲಾ ಸುದ್ದಿ ದೇಶ ರಾಜಕೀಯ

ನವದೆಹಲಿ: ಕಳೆದ 25 ರಿಂದ 30 ವರ್ಷಗಳಿಂದ ರೈತರ ಸಮಸ್ಯೆಗಳ ಬಗೆಹರಿಸುವ ಭರವಸೆ ನೀಡಿದ್ದು, ಅವುಗಳನ್ನು ಬಗೆಹರಿಸಲಿಲ್ಲ. ಅವರು ಕೇವಲ ವೋಟಿಗಾಗಿ ಭರವಸೆ ನೀಡಿದ್ದರು. ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದರು.

 

 

 

Chitradurga modi charge to congress
ಪ್ರಧಾನಿ‌ ಮೋದಿ ತಮ್ಮ ವಿಡಿಯೋ ಕಾನ್ಫರೆನ್ಸ್ ಭಾಷಣದಲ್ಲಿ ಹೇಳಿದ್ದಾರೆ.
ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನೀವು ನಮ್ಮೆಲ್ಲರ ಅನ್ನದಾತರಾಗಬೇಕು. ನಮ್ಮ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಲು 1,600 ಕೋಟಿ ಹಣವನ್ನು ರೈತರಿಗಾಗಿ ಹಾಕಿದ್ದೆವೆ. ದೇಶದ ರೈತರು ಹಿಂದುಳಿದಿಲ್ಲ. ರೈತರು ಕಷ್ಟ ಪಡುವ ದಿನಗಳು ದೂರಾಗಿವೆ. ರೈತರಿಗಾಗಿ ಹೊಸ ಕಾನೂನುಗಳು ಬರುತ್ತಿವೆ. ಈ ಕಾನೂನುಗಳ ಬಗ್ಗೆ ಚರ್ಚೆಯಾಗುತ್ತಿವೆ. ರೈತ ಸಂಘಟನೆಗಳ ಜೊತೆ ಮಾತಕತೆ ನಡೆದಿದೆ. ರೈತರಿಗಾಗಿ ಫುಡ್ ಪ್ರೊಸೆಸಿಂಗ್ ಯೂನಿಟ್ ಹಾಗೂ ಕೋಲ್ಡ್ ಸ್ಟೋರೇಜ್ ಕೂಡ ಮಾಡಲಾಗುತ್ತದೆ. ವಿದೇಶಗಳಲ್ಲೂ ನಮ್ಮ ಕೃಷಿ ಬಗ್ಗೆ ಚರ್ಚೆಯಾಗುತ್ತಿವೆ .
ರೈತರಿಗಾಗಿ ಹೊಸ ಕಾನೂನು ಜಾರಿಗೆ ಬರುತ್ತಿವೆ. ಈಗ ಹೊಸ ಕಾನೂನಿನ ಬಗ್ಗೆ ಚರ್ಚೆಯಾಗುತ್ತಿದೆ. ರೈತರಿಗಾಗಿ 1,600 ಕೋಟಿ ಹಣವನ್ನು ಹಾಕಿದ್ದೇವೆ . ರಾತ್ರೋ ರಾತ್ರಿ ಈ ಕಾನೂನು ಜಾರಿಗೆ ತಂದಿಲ್ಲ. ಇದು ಎಲ್ಲೆಡೆ ಚರ್ಚೆಯಾಗಿದೆ. ಬಡವರು,ಹಳ್ಳಿಗಳು ಉದ್ದಾರವಾಗಿವೆ. ನನಗೆ ಕ್ರೆಡಿಟ್ ಬೇಡ ರೈತರಿಗೆ ಕ್ರೆಡಿಟ್ ಸಿಕ್ಕರೆ ಸಾಕು ಎಂದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *