ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಮತ್ತೆ ಬಯಲಾಗಿದೆ. ಕಾರ್ಯಕರ್ತರ ಮುಂದೆಯೇ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷರು ಕೈ ಕೈ ಮಿಲಾಸುವಂತೆ ಜಟಾಪಟಿ ಮಾಡಿ ಜಗಳಕ್ಕಿಳಿದು ಪಕ್ಷದ ಮರ್ಯಾದೆಯನ್ನು ಬೀದಿಗೆ ತಂದಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರೇಗುಂಟನೂರು ಗ್ರಾಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾಗಿದ್ದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವ ಹಾಗೂ ಮಹಾತ್ಮ ಗಾಂಧಿ ಗ್ರಾಮಸ್ವರಾಜ್ಯ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ಏಕಾಏಕಿ ವೇದಿಕೆಯ ಮೇಲೆ ಜಗಳಕ್ಕಿಳಿದರು.
ಕಳೆದ ಚುನಾವಣೆಯಲ್ಲಿ MLA ಟಿಕೆಟ್ ವಂಚನೆ ಮಾಡಿದ್ದು, ನನಗೆ ಮೋಸಮಾಡಿದ್ದು ಹಾಗೂ ಸರ್ವ ಅಭ್ಯರ್ಥಿಗಳು ಸೋಲಿಗೆ ಆಂಜನೇಯ ಕಾರಣ. ಗೆಲ್ಲಿಸೋ ತಾಕತ್ತಿಲ್ಲದವರು ಕೈಗೆ ಬಳೆ ತೊಟ್ಕಳಿ ಎಂದು ಮಂಜುನಾಥ್ ಹೇಳಿದ್ದರು.
ನಂತರ ಮಾತನಾಡಿದ ಮಾಜಿ ಸಚಿವ ಆಂಜನೇಯ ಮಾತಿನ ಬರದಲ್ಲಿ ಮತ್ತೆ ಜಗಳಕ್ಕೆ ಕಾರಣವಾಯಿತು. *ಮೈಕ್ ಕೊಡಲೇ ಅದೇನ್ ಮಾಡ್ತಾನೋ ನೋಡನಾ ಎಂದು ಆಂಜನೇಯ ಮತ್ತೆ ಜಗಳಕ್ಕೆ ಪಂಥಾಹ್ವಾನ ಕೊಟ್ಟರು.
ಏಕಾಏಕಿ ಜಗಳಕ್ಕಿಳಿದ ಆಂಜನೇಯನ ವಿರುದ್ಧ ಜಿ.ಎಸ್. ಮಂಜುನಾಥ್ ಮುಖಾಮುಖಿ ವಾಗ್ವಾದಕ್ಕಿಳಿದರು. ಅಪರೂಪಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರಿಗೆ ಇವರ ಜಗಳ ನಿಜಕ್ಕೂ ಮುಜುಗರವಾಯಿತು.
ಲಿಂಗಾಯತ ಸಮುದಾಯದ ಸಾದರು ನಿನಗೆ ಮತ ಹಾಕಿದ್ದೇವೆ. ನಿನ್ನ ಗೆಲುವಿಗೆ ಎಲ್ಲರ ಶ್ರಮ ಇದೆ. ಕಾಂಗ್ರೆಸ್ ನ ಮರ್ಯಾದೆ ಹಾಳು ಮಾಡಲು ಇಷ್ಟ ಸಾಕು, ಸಚಿವನಾಗಿ ನೀನು ಮಾಡಿದ್ದೇನು ಎಲ್ಲರ ಬೆನ್ನಿಗೆ ಚೂರಿ ಹಾಕಿದ್ದೆ ಎಂದು ಏಕವಚನಗಳಲ್ಲಿ ಕಾಳಗಕ್ಕಿಳಿದರು.
ಆಂಜನೇಯ ಅವರು ಜಗಳ ಸುಧಾರಿಸುವ ಬದಲು ಬೆಂಕಿಗೆ ತುಪ್ಪ ಹಾಕಿ ಯಡವಟ್ಟು ಮಾಡಿದ್ದು ಒಂದು ಕಡೆಯಾದರೆ. ಕೆಲ ಕೈ ಸಹಚರರು ವೇದಿಕೆ ಏರಿ ಇನ್ನೂ ಯಡವಟ್ಟು ಮಾಡಿ ಕೈಬಲ ಕುಂದಿಸಿದರು. ಜಗಳಕ್ಕೆ ಕಾರಣವಾದರು ಎಂದು ಅಲ್ಲಿದ್ದ ಎಲ್ಲರೂ ಬೇಸರ ಹೊರಹಾಕಿದರು.ವೇದಿಕೆಯ ಮೇಲೆ ನಡೆದ ಜಟಾಪಟಿ, ಜಗಳಕ್ಕೆ ಮಾಜಿ ಸಂಸದ ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ತಾಜ್ ಪೀರ್,ಕಾರ್ಯಾಧ್ಯಕ್ಷರಾದ ಹಾಲೇಶ್, ಅನೇಕ ಘಟಕಗಳ ಜಿಲ್ಲಾಧ್ಯಕ್ಷರು, ಹಾಗೂ ಇಡೀ ಜಿಲ್ಲಾ ಕಾಂಗ್ರೆಸ್ ಸಾಕ್ಷಿಯಾಗಿತ್ತು.