ಪ್ರವಾಹ ಪೀಡಿತ ನಿರಾಶ್ರಿತರ ಕೇಂದ್ರಗಳಲ್ಲಿ ನಿರಾಶ್ರಿತರೊಂದಿಗೆ ಅಖಂಡ ಶಿವ ಭಜನೆಯಲ್ಲಿ ಭಾವ ಪರವಶರಾದ ಶಾಸಕ ಮತ್ತು ತಹಶೀಲ್ದಾರ್
ಹೇಮಾವತಿ ನದಿಯ ಪ್ರವಾಹದ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಪರಶುರಾಂಪುರ ಹೋಬಳಿಯ ಹಾಲುಗೊಂಡನಹಳ್ಳಿ ಮತ್ತು ಸೂರನಹಳ್ಳಿ ಗ್ರಾಮಗಳಲ್ಲಿ ತಾಲೂಕ್ ಆಡಳಿತದಿಂದ ನಿರಾಶ್ರಿತರ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಹಾಲುಗೊಂಡನಹಳ್ಳಿ ಗ್ರಾಮದಲ್ಲಿ 21 ಕುಟುಂಬಗಳ 75 ಜನ ಮತ್ತು ಸೂರನಹಳ್ಳಿ ಗ್ರಾಮದಲ್ಲಿ 12 ಕುಟುಂಬಗಳ 50 ಜನರ ಆರೈಕೆ ಕೇಂದ್ರದಲ್ಲಿ ಈ ಜನರಿಗೆ ಬೇಕಾಗುವಂತ ದೈನಂದಿನ ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ ಈ ಕೇಂದ್ರಗಳ ಪರಿಶೀಲನೆಗೆ ಚಳ್ಳಕೆರೆ ಟಿ ರಘುಮೂರ್ತಿ ಮತ್ತು ಚಳ್ಳಕೆರೆ ತಹಶೀಲ್ದಾರ್ ರಘು ಮೂರ್ತಿ ಬುಧವಾರ ಸಂಜೆ ಏಳು ಗಂಟೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ನಂತರ ಮಾತನಾಡಿದ ಶಾಸಕರಾದ ಟಿ ರಘುಮೂರ್ತಿ ಹವಾಮಾನ ವೈಪರಿತ್ಯದಿಂದ ಒಂದು ಆರೈಕೆ ಕೇಂದ್ರದಲ್ಲಿರುವ ಈ ಬಂಧುಗಳನ್ನು ಈ ರೀತಿ ನೋಡುವುದು ನನಗೆ ತುಂಬಾ ಮನಸ್ಸಿಗೆ ನೋವುಂಟು ಮಾಡಿದೆ ಒಂದು ಕಡೆ ಈ ನೋವಾದರೆ ಇನ್ನೊಂದು ಕಡೆ ಒಂದು ಶತಮಾನದಿಂದಲೂ ಈ ಒಂದು ನದಿ ಪಾತ್ರ ಈ ರೀತಿ ತುಂಬಿರುವುದನ್ನು ನಾವ್ಯಾರು ಕೂಡ ನೋಡಿಲ್ಲ ಮುಂದಿನ ದಿನಗಳಲ್ಲಿ ರೈತನ ಬದುಕು ಸಮೃದ್ಧಿಯಾಗಲಿದೆ ಎನ್ನುವ ಖುಷಿ ಇದೆ. ಇವೆರಡನ್ನು ಕೂಡ ಸಂತ್ರಸ್ತರು ಮನಗಾಣಬೇಕು ಮುಂದಿನ ದಿನಗಳಲ್ಲಿ ಈ ರೀತಿ ಪ್ರವಾಹ ಸಂಭವಿಸಿದಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವ ದೃಷ್ಟಿಯಲ್ಲಿ ಪುನರ್ವಸತಿಗೆ 10 ಎಕರೆ ಜಮೀನನ್ನು ಮೀಸಲಿಸಲಾಗಿದೆ ಇಲ್ಲಿಯ ಸಂತ್ರಸ್ತರನ್ನು ಆದ್ಯತೆ ಮತ್ತು ಅರ್ಹತೆಗೆ ಅನುಗುಣವಾಗಿ ಸ್ಥಳಾಂತರಿಸಲಾಗುವುದು ಹಾಗೂ ತಾಲೂಕು ಆಡಳಿತದಿಂದ ಯಾವುದೇ ಸಂತ್ರಸ್ತರಿಗೆ ಅನಾನುಕೂಲವಾಗದ ರೀತಿಯಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಹೇಳಿದರು ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ಶಾಸಕರು ಮತ್ತು ಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳ ದೂರ ದೃಷ್ಟಿಯಿಂದ ಇಷ್ಟೆಲ್ಲಾ ಪ್ರವಾಹ ಸಂಭವಿಸಿದರು ಕೂಡ ಯಾವುದೇ ವ್ಯಕ್ತಿಗೆ ಅನ್ಯಾಯವಾಗದಂತೆ ತಾಲೂಕು ಆಡಳಿತ ಸಂತ್ರಸ್ತರ ಬೆನ್ನಿಗೆ ನಿಂತಿದೆ ಈ ಪ್ರವಾಹದಿಂದ ಈ ಭಾಗದ ಯಾವುದೇ ಜನರು ಧೃತಿಗಿಡಬಾರದು ಮತ್ತು ಪ್ರವಾಹ ಕಡಿಮೆಯಾಗುವವರೆಗೆ ವೃದ್ಧರು ಮಕ್ಕಳು ನದಿಗೆ ಇಳಿಯಕೂಡದು ಮತ್ತು ಯುವಕರು ಕೂಡ ಈಜು ಮತ್ತಿತರ ಕೃತ್ಯಗಳಿಗೆ ಮುಂದಾಗಬಾರದೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಸಂತ್ರಸ್ತರು ಅಖಂಡ ಶಿವ ಭಜನೆಯಲ್ಲಿ ತೊಡಗಿದ್ದು ಸಂತ್ರಸ್ತರೊಂದಿಗೆ ಶಾಸಕರು ಹಾಗೂ ತಹಶೀಲ್ದಾರ್ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಾಳ ಹಾಕಿ ಭಕ್ತಿ ಭಾವ ಪರವಶರಾಗಿ ಮೈಮರೆತು ಶಿವ ಭಜನೆ ಮಾಡಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಎನ್ ರಘುಮೂರ್ತಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಲಕ ಅಭಿಯಂತರು ವಿಜಯ ಭಾಸ್ಕರ್ ತಾಲೂಕ್ ಪಂಚಾಯತಿಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ ಪಿಡಿಒ ಗುಂಡಪ್ಪ ಮುಖಂಡರುಗಳಾದ ಸೂರನಹಳ್ಳಿ ಶ್ರೀನಿವಾಸ್ ಗುಜ್ಜಾರಪ್ಪ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ತಿಪ್ಪೇಸ್ವಾಮಿ ಚವಳು ಪ್ರಕಾಶ್ ಚನ್ನಮ್ಮನ ನಾಗತಿ ಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆನಂದ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು





