ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆ ಸುರಿಯಲಿದೆ ಎಂದು ಬೆಂಗಳೂರಿನ ಮೀಟರಾಲಾಜಿಕಲ್ ಸೆಂಟರ್ ಸಂಬಂಧ ಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಗಮನಹರಿಸುವಂತೆ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮುಂದಿನ ಮೂರು ಗಂಟೆಗಳಲ್ಲಿಗುಡಿಗು ಸಿಡಿಲಿನಿಂದ ಮಳೆ ಆಗಲಿದ್ದು, ಜಿಲ್ಲೆಯ ಜನತೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಉಳಿದಂತೆ ದಾರವಾಢ, ಗದಗ, ಹಾವೇರಿ,ಕಲ್ಬುರ್ಗಿ,ಕೊಪ್ಪಳ,ರಾಯಚೂರು,ಯಾದಗಿರಿ, ಬಳ್ಳಾರಿ, ದಾವಣಗೆರೆ ತುಮಕೂರು ಚಾಮರಾಜ ನಗರದಲ್ಲಿಯೂ ಆಗಲಿದೆ ಎಂದು ತಿಳಿಸಿದೆ





