Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ಕ್ರೈಂ»ಡಾ.‌ರೂಪಾ‌ರವಿ ಸಾವಿನ ಸುತ್ತ ಅನುಮಾನದ ಹುತ್ತ
ಕ್ರೈಂ

ಡಾ.‌ರೂಪಾ‌ರವಿ ಸಾವಿನ ಸುತ್ತ ಅನುಮಾನದ ಹುತ್ತ

D KumaraswamyBy D KumaraswamyDecember 5, 2022No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಚಿತ್ರದುರ್ಗ ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರೂಪಾ ರವಿ ಅವರ ಸಾವಿನ ಸುತ್ತ ಅನುಮಾನದ ಹುತ್ತಗಳು ಕಂಡು ಬರುತ್ತಿವೆ.
ಇಂದು‌ ಬೆಳಗ್ಗೆ ಅವರು ಬಾತ್ ರೂಂ ನಲ್ಲಿ ಕಾಲು ಜಾರಿ ಬಿದ್ದು ಗಾಯವಾಗಿದೆ. ರಕ್ತ ಸ್ರಾವವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆಯನ್ನು ಕೊಡಿಸಲಾಗಿತ್ತು.ಆದರೆ ಇದು ಫಲಕಾರಿಯಾಗದೆ ನಿಧನರಾದರು ಎಂದು ಸುದ್ದಿ ಬಂದಿತ್ತು. ಇವರ ಸಾವು, ಅನುಮಾನದ ಹುತ್ತಗಳನ್ನು ಸೃಷ್ಠಿಸಿವೆ.‌ ಕಳೆದ ವಾರದ ಅವರ ಸಹೋದ್ಯೋಗಿಗಳ ಜೊತೆಗೆ ಮೈಸೂರಿಗೆ ಹೋಗಿದ್ದು, ಅಲ್ಲಿ ತಮ್ಮ ತಂದೆ ತಾಯಿಯವರ ಸಮಾಧಿ‌ ಬಳಿ ನಾನು ಕೂಡ ನಿಮ್ಮ ಜೊತೆ ಬರಬೇಕಿತ್ತು. ಎಂದು ತುಂಬಾ ಅತ್ತುಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳುತ್ತಾರೆ. ಇವರ ಪತಿ ಸಾಕಷ್ಟು ಸಾಲ‌ ಮಾಡಿದ್ದರು, ಆ ಸಾಲವನ್ನು ತೀರಿಸಲು ಅನೇಕ ಆಸ್ತಿಯನ್ನು ಮಾರಾಟ ಮಾಡಿದ್ದರು, ಇದರಲ್ಲಿ ತೋಟ ಜಮೀನು ಹಾಗು ಆಸ್ಪತ್ರೆ ಕೂಡ ಸೇರಿತ್ತು ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ಅವರು ಘಟನೆ ನಡೆಯುವ ಹಿಂದಿನ ದಿನ ಅವರ ಪತಿಗೆ ಜ್ಯೂಸ್ ಕೊಟ್ಟು ತಮ್ಮ ಕೊಠಡಿ ಕಡೆಗೆ ಹೋಗಿದ್ದರು ಎಂದು ಮನೆಯಲ್ಲಿರುವವರು ಹೇಳುತ್ತಾರೆ, ಘಟನೆಯ ನಂತರ ಅವರ ತೆಲೆಗೆ ದೊಡ್ಡದಾದ ಗಾಯವಾಗಿದೆ. ಅವರಿಗೆ ಶೂಟ್ ಮಾಡಲಾಗಿದೆ. ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಅನುಮಾನ ಎಂದರೆ ಅವರ ಪತಿ ಡಾ. ರವಿ ಅವರು ಒಬ್ಬ ಮೂಳೆ ರೋಗ ತಜ್ಞರಾಗಿರುವ ಅವರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಬೇಕಿತ್ತು. ಹಾಗೂ ಪೋಲಿಸರಿಗೆ ಮಾಹಿತಿ‌ ಕೊಡಬೇಕಿತ್ತು. ಆದರೆ ಇದ್ಯಾವುದನ್ನು ಮಾಡದೆ ಮೂಳೆ ರೋಗದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಕೂಡ ಅನುಮಾನಕ್ಕೆ ಎಡೆ ಮಾಡಿದೆ. ಇದರ ಜೊತೆಗೆ ಅವರ ಬೆಡ್ ರೂಂ ನಲ್ಲಿ ಅವರ ಡೆತ್ ನೋಟ್ ಕೂಡ ಸಿಕ್ಕಿದೆ. ಆದರೆ ಅದರಲ್ಲಿರುವ ಮಾಹಿತಿ ಬಹಿರಂಗಗೊಂಡಿಲ್ಲ, ಇದೆಲ್ಲವೂ ಕೂಡ ಡಾ. ರೂಪಾ‌ರವಿ ಅವರ ಸಾವಿನ ಬಗ್ಗೆ ಅನುಮಾನಗಳನ್ನು ಹುಟ್ಟಿ ಹಾಕಿವೆ. ಇದೆಲ್ಲದರ ನಡುವೆ ಬಸವೇಶ್ವರ ಆಸ್ಪತ್ರೆಯ ವೈದ್ಯರುಗಳು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ ತಲೆಗೆ ತೀವ್ರತರವಾದ ಗಾಯವಾಗಿದ್ದು, ಅದನ್ನು ಪರೀಕ್ಷಿಸಿದಾಗ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲು ಹೋದಾಗ ತಲೆಯಲ್ಲಾದ ಗಾಯವನ್ನು ಪರೀಕ್ಷಿಸಿದ್ದು, ಅದರಲ್ಲಿ ಅನುಮಾನ ಮೂಡಿ ಬಂದಿದೆ. ಇದರಿಂದಾಗಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲು ನಿರಾಕರಿಸಿದ್ದಾರೆ. ಇತ್ತ ಕಡೆ ಅವರ ಸಹೋದರರಿಗೆ ಸಿಕ್ಕ ಡೆತ್ ನೋಟ್ ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಇದೆಲ್ಲವನ್ನು ಇಟ್ಟುಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಬೆಂಗಳೂರಿನಿಂದ ಎಫ್ ಎಸ್ ಎಲ್ ತಂಡವನ್ನು ಬರುವಂತೆ ಮನವಿ‌ ಮಾಡಿದ್ದು, ತಂಡವು ಚಿತ್ರದುರ್ಗಕ್ಕೆ ಆಗಮಿಸುತ್ತಿದೆ.  ಎಂದು ಎಸ್ಪಿ ಕೆ.‌ಪರುಶುರಾಮ್ ಹೇಳಿದ್ದಾರೆ. ಎಫ್ ಎಸ್‌ಎಲ್ ತಂಡ ಬಂದು‌‌ ಪರೀಕ್ಷಿಸಿ ಅವರ ಫಲಿತಾಂಶ ಬಂದ ಮೇಲೆ ನಾಳೆ ಮರಣೋತ್ತರ ಪರೀಕ್ಷೆ ನಡೆಸಿ ಇದು ಕೊಲೆಯೋ‌, ಆತ್ಮಹತ್ಯೆಯೋ ಅಥವ ಅಕಾಸ್ಮಾತಾಗಿ‌ ನಡೆದಿರುವ ಘಟನೆಯೋ ಎಂದು ತಿಳಿಸಬೇಕಿದೆ. ಅಲ್ಲಿಯವರೆಗೂ ಕೂಡ ಅನುಮಾನಗಳು ಅನುಮಾನಗಳಾಗಿಯೇ ಉಳಿದಿರುತ್ತವೆ.

 

 

Share. Facebook Twitter Pinterest LinkedIn Tumblr WhatsApp Email
Previous Article1 ರಿಂದ 8 ನೇ ತರಗತಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ರದ್ದು ಖಂಡನೆ
Next Article ಹವಾಮಾನಕ್ಕೆ ತಕ್ಕಂತೆ ಅಧುನಿಕ‌ ಬೆಳೆ‌ ಬೆಳೆಯಿರಿ
D Kumaraswamy
  • Tumblr

Related Posts

ಹಾಡು ಹಗಲೇ ಮನೆ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಒಡವೆ ದೋಚಿದ ಡರೋಡೆ ಗ್ಯಾಂಗ್

September 1, 2025

ಹೊಸದುರ್ಗ: ಬೈಕ್ ಕಳ್ಳರಿಬ್ಬರ ಬಂಧನ11 ಬೈಕ್ ಗಳು ವಶ

August 26, 2025

ಚಾಕು ತೋರಿಸಿ ಬೆದರಿಸಿ ಚಿನ್ನದ ಮಾಂಗಲ್ಯ ಸರ ಕದ್ದಿದ್ದ ಕಳ್ಳನ ಬಂಧಿಸಿದ ಶ್ರೀರಾಂಪುರ ಪೊಲೀಸರು

September 13, 2024

ಕುಡಿದ ಅಮಲಿನಲ್ಲಿ ತೆಗೆದೆ ಬಿಟ್ರು ಸ್ನೇಹಿತನ ಪ್ರಾಣವ

February 18, 2024
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.