BIG BREAKING
ಮುರುಘಾ ಶರಣರಿಗೆ 14 ದಿನಗಳ ನ್ಯಾಯಾಂಗ ಬಂಧನ
ಅತ್ಯಾಚಾರ ಮತ್ತು ಪೋಕ್ಸೋಕಾಯ್ದೆಯಡಿಯಲ್ಲಿ ಮುರುಘಾ ಶರಣರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.ನ್ಯಾಯಾಧೀಶರು 14 ದಿನಗಳನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಎಂದು ಎಸ್ಪಿಕೆ ಪರುಶುರಾಮ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಒಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ಮಾಡುತ್ತಿದ್ದೇವೆ, ಉಳಿದವರನ್ನು ಕೂಡ ವಿಚಾರಣೆ ಮಾಡುತ್ತೇವೆ ಎಂದರು. ಸಾಕ್ಷಾಧಾರಗಳ ವಿಳಂಬದಿಂದಾಗಿ ಬಂಧನ ವಿಳಂಬವಾಯ್ತು.ಇನ್ನು ಇಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ನಾವು ಚಳ್ಳಕೆರೆಗೆ ಕರೆದೊಯ್ಯಾಲಾಯಿತು. ಮುರುಘಾ ಶರಣರು ಸದ್ಯಕ್ಕೆ ಇಲ್ಲೆ ಇರ್ತಾರೆ. ಶ್ರೀಗಳ ಆರೋಗ್ಯ ಬಗ್ಗೆ ವಿಚಾರ ಮಾಡಿದ್ದು, ವೈದ್ಯರು ಆರೋಗ್ಯ ತಪಾಸಣಾ ನಡೆಸಿದ್ದು, ನ್ಯಾಯಾಲಯದ ಮುಂದೆ ನೀಡುತ್ತಾರೆ. ಅದನ್ನು ನೋಡಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ. ಮುರುಘಾ ಶರಣರು ಎಲ್ಲಾರೀತಿಯ ಸಹಕಾರ ನೀಡಿದರು. ನಾವುಮತ್ತೆ ಅವರನ್ನು ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ ಎಂದು ಹೇಳಿದರು.





