Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಕೋಟೆ ನಾಡಿನಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ಅಧಿಕಾರಿಗಳು ನುಂಗಿರೋದು ಬರೋಬ್ಬರಿ 18 ಕೋಟಿ !!!!!!
ರಾಜ್ಯ

ಕೋಟೆ ನಾಡಿನಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ಅಧಿಕಾರಿಗಳು ನುಂಗಿರೋದು ಬರೋಬ್ಬರಿ 18 ಕೋಟಿ !!!!!!

D KumaraswamyBy D KumaraswamyNovember 26, 2022Updated:November 26, 2022No Comments3 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು 2016- 17 ನೇ ಸಾಲಿನಲ್ಲಿ ಘೋಷಿಸಿ ಜಾನುವಾರುಗಳಿಗಾಗಿ ಗೋಶಾಲೆಯನ್ನು ತೆರೆದು ಜಾನುವಾರುಗಳ ನಿರ್ವಹಣೆಗಾಗಿ ಮೇವು ಖರೀದಿಗಾಗಿ  84 ಕೋಟಿ ರೂಪಾಯಿಗಳ ಹಣವನ್ನು ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಬಿಡುಗಡೆ ಮಾಡಿತ್ತು. ಆ ಕೋಟ್ಯಾಂತರ ರೂಪಾಯಿ ಹಣದಲ್ಲಿ ಬರೋಬ್ಬರಿ 18 ಕೋಟಿಯಷ್ಟು ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿರುವ ಘಟ‌ನೆ ತಡವಾಗಿ ಬೆಳಕಿಗೆ ಬಂದಿದೆ.

 

 

ಚಿತ್ರದುರ್ಗ ಜಿಲ್ಲೆಯು ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ 60 ಬಾರಿ ಬರಗಾಲಕ್ಕೆ ತುತ್ತಾಗಿದೆ. ಹಾಗೆಯೇ 2016- 17 ನೇ ಸಾಲಿನಲ್ಲಿ ಕೂಡ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿತ್ತು. ಇದರಿಂದ ಆಗಿನ ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿತ್ತು. ಜನ ಜಾನುವಾರುಗಳು ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಲ್ಲಿ ಕೂಲಿ‌ ಕೆಲಸ ಕೊಟ್ಟರೆ ಜಾನುವಾರುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಗೋಶಾಲೆಗಳನ್ನು ತೆರೆದು ಅದರಲ್ಲಿ ಬರುವ ಜಾನುವಾರುಗಳಿಗೆ ಮೇವು ವಿತರಿಸಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಇದಕ್ಕಾಗಿ ಜಿಲ್ಲೆಗೆ ಅಂದಿನ ಸರ್ಕಾರ 84 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ  ಚಳ್ಳಕೆರೆ  ತಾಲೂಕಿಗೆ 30 ಕೋಟಿ ಬಿಡುಗಡೆ ಮಾಡಿದ್ದರೆ ಅದರಲ್ಲಿ ಸೇರಿ 18 ಕೋಟಿ 60 ಲಕ್ಷ ಅನುದಾನ ಅವ್ಯವಹಾರವಾಗಿದೆ. ಇಷ್ಟೂ ಅನುದಾನಕ್ಕೆ ಮೇವು ಸರಬರಾಜು ಮಾಡಿದ್ದೇವೆ ಎಂದು ನಕಲಿ ಬಿಲ್ ಹಾಗೂ ನಕಲಿ ಟಿನ್ ನಂಬರ್ ಹಾಗೂ ನಕಲಿ ಟೆಂಡರ್ ದಾರರನ್ನು ಸೃಷ್ಠಿಸಿ 18 ಕೋಟಿ 60 ಲಕ್ಷ ಹಣವನ್ನು ಸಂಪೂರ್ಣ ಗುಳುಂ ಮಾಡಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಆಲಘಟ್ಟದ ಈ. ರವಿ ಆರೋಪಿಸಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ ಗೋಶಾಲೆಗಳಿಗೆ 30 ಕೋಟಿ ಹಾಗೂ ಚಿತ್ರದುರ್ಗ ತಾಲೂಕಿಗೆ 7 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು, ಅದೂ ಕೂಡ ನಕಲಿ ದಾಖಲೆಗಳನ್ನು ಸೃಷ್ಠಿಸಿ 60 ಲಕ್ಷ  ನುಂಗಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಅನುದಾನ 45 ಲಕ್ಷದ 98 ಸಾವಿರದಲ್ಲಿ ಕ್ರೆಡಿಟ್ ಬಿಲ್ ನಂಬರ್ 1 ರಿಂದ 4 ರವರೆಗೆ ಬಿಲ್ ಗಳಲ್ಲಿನ ಟಿನ್ ನಂಬರಿಗೂ ಹಾಗೂ ಸರಬರಾಜು ಮಾಡಿ ಬಿಲ್ ಕೊಟ್ಟಿರುವ ಬಿಲ್ ಗು ಒಂದಕ್ಕೊಂದು ತಾಳೆಯೇ ಇಲ್ಲ, ಇನ್ನೊಂದು ಖಾತೆಯಲ್ಲಿ 9 ಲಕ್ಷದ 94 ಸಾವಿರ ಅನುದಾನಕ್ಕೆ 1 ರಿಂದ 2 ಬಿಲ್ ಗಳಲ್ಲಿ ಟಿನ್ ನಂಬರೇ ಇಲ್ಲ, ದಿನಾಂಕವನ್ನು ನಮೂದಿಸಿಲ್ಲ, ಇನ್ನು ಹಣ ಸಂದಾಯ ಮಾಡಿರುವ ರಶೀದಿಗಳಲ್ಲಿ ದಿನಾಂಕ, ಕಿಲೋ ಮೀಟರ್, ಚಕ್ ಸಂಖ್ಯೆ, ಟ್ರಾಕ್ಟರ್ ನಂಬರ್ ನಮೂದು ಮಾಡದೆ ಸುಮಾರು 4 ಲಕ್ಷದ 45 ಸಾವಿರ ಹಣವನ್ನು ವಂಚನೆ ಮಾಡಲಾಗಿದೆ ಎಂದು ತಿಳಿದು‌ ಬಂದರೆ, ಕ್ರೆಡಿಟ್ ಬಿಲ್ ನಂಬರ್ 1 ರಿಂದ 43 ಪುಟಗಳ ಸಂಖ್ಯೆಯಲ್ಲಿ‌ ಭ್ರಷ್ಠಾಚಾರ ಮಾಡಿರುವುದು ಕಂಡು‌ಬಂದಿದೆ. ಆದರೆ ಇದೆಲ್ಲವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆ ಮಾಡಿಸದೆ ವಂಚಿಸಲಾಗಿದೆ ಎಂದು ಆಲಘಟ್ಟದ ಆರ್ ಟಿ ಐ ಕಾರ್ಯಕರ್ತ ಈ. ರವಿ ಆರೋಪಿಸಿದ್ದಾರೆ. ಈ‌ ಎಲ್ಲಾ ದಾಖಲೆಗಳಿಂದ ಅಧಿಕಾರಿಗಳು ನಕಲಿ ಬಿಲ್ ಗಳನ್ನು ಸರ್ಕಾರಕ್ಕೆ ನೀಡಿ ಚಿತ್ರದುರ್ಗ ತಾಲೂಕಿನಲ್ಲಿ 60 ಲಕ್ಷ ಹಣವನ್ನು ಭ್ರಷ್ಠಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಚಳ್ಳಕೆರೆ ತಾಲೂಕಿನಲ್ಲಿ ಕೂಡ 30 ಕೋಟಿ 52 ಲಕ್ಷದ 83 ಸಾವಿರ ಅನುದಾನ ಬಿಡುಗಡೆ ಮಾಡಿತ್ತು. ಇಷ್ಟು ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿಯೂ ಕ್ರೆಡಿಟ್ ಬಿಲ್ 1 ರಿಂದ 14 ರವರೆಗೂ ಟಿನ್ ನಂಬರಿಗೂ ಹಾಗೂ ಮೇವು ಸರಬರಾಜು ದಾರರಿಗೂಹೊಂದಾಣಿಕೆಯೇ ಇಲ್ಲದೆ ನಕಲಿ ಬಿಲ್ ಗಳನ್ನು‌ ಸೃಷ್ಠಿಸಿ ಇದರಲ್ಲಿ 6 ಕೋಟಿ 10 ಲಕ್ಷದ 57 ಸಾವಿರ ವಂಚನೆ ಮಾಡಲಾಗಿದೆ. ಕ್ರೆಡಿಟ್ ಬಿಲ್ ನಂಬರ್ 1 ರಿಂದ 16 ರವರೆಗಿನ ಬಿಲ್ ಗಳಲ್ಲಿಯೂ‌ ಕೂಡ ಟಿನ್ ನಂಬರ್ ಹಾಗೂ ಮೇವು ಸರಬರಾಜು ಬಿಲ್ ಗಳಿಗೂ ಹೊಂದಾಣಿಕೆ ಇಲ್ಲ, ಇಲ್ಲಿಯೂ ಕೂಡ ನಕಲಿ ಬಿಲ್ ಸೃಷ್ಠಿಸಲಾಗಿದ್ದು,5,15,93, 497 ರೂಪಾಯಿಗಳ ವಂಚಿಸಲಾಗಿದೆ. ಇನ್ನು ಕ್ರೆಡಿಟ್ ಬಿಲ್ ನಂಬರ್ 1 ರಿಂದ 14 ರವರೆಗಿನ ಬಿಲ್ ಗಳಲ್ಲಿ 7,36,81,811 ರೂಪಾಯಿಗಳನ್ನು ವಂಚಿಸಲಾಗಿದೆ. ಇಲ್ಲಿಯೂ ಕೂಡ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಿಲ್ಲದೆ ಇರುವುದು ಕಂಡು ಬರುತ್ತದೆ. ಇದರಿಂದ ಚಳ್ಳಕೆರೆ ತಾಲೂಕಿನ ಬಿಡುಗಡೆಯಾಗಿದ್ದ 18,63,32 ,370 ರೂಪಾಯಿಗಳು ವಂಚನೆಯಾಗಿರುವುದು ನಕಲಿ ಬಿಲ್ ಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.ಇದರಿಂದ ಕೂಲಂಕುಷವಾಗಿ ದಾಖಲೆಗಳ‌ನ್ನು ಪರಿಶೀಲಿಸಿ, ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆರ್ ಟಿ ಐ ಕಾರ್ಯಕರ್ತ ಈ. ರವಿ ಆಲಘಟ್ಟ ದೂರನ್ನು ನೀಡಿದ್ದಾರೆ.

Share. Facebook Twitter Pinterest LinkedIn Tumblr WhatsApp Email
Previous Articleಇ ಸ್ವತ್ತಿಗೆ ಲಂಚ: ಕುರುಬರಹಳ್ಳಿ ಪಿಡಿಓ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
Next Article ಮಹನೀಯರಿಗೆ ಜಾತಿ ಬೇಲಿ ಕಟ್ಟುವುದು ಸಮಾಜಕ್ಕೆ ನಷ್ಟ
D Kumaraswamy
  • Tumblr

Related Posts

ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

December 3, 2025

ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

November 30, 2025

ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

November 26, 2025

ಛಲವಿದ್ದರೆ ಏನಾದರೂ ಸಾಧಿಸಬಹದು

November 17, 2025
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.