ಡಿ.25 ಕ್ಕೆ ನೂತನ ವಿಕಾಸಸೌಧ ಲೋಕಾರ್ಪಣೆ

ರಾಜ್ಯ

  1.  
  2.  

ಚಿತ್ರದುರ್ಗ : ಹೊಳಲ್ಕೆರೆಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನ ವಿಕಾಸ ಸೌಧದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಸಮಾರಂಭ ಡಿ. 25 ರ ಬುಧವಾರ ನಡೆಯಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿ, ಪುರಸಭೆಯಿಂದ ಈ ಸಂಘಕ್ಕೆ ಜಾಗ ನೀಡಲಾಗಿತ್ತು. ಇಲ್ಲಿ ಸರ್ಕಾರದ ಸಹಾಯವಿಲ್ಲದೆ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 4518 ಸ್ವಸಹಯ ಸಂಘಗಳನ್ನು ರಚನೆ ಮಾಡಿ ಇದರಲ್ಲಿ 40265 ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಇವರ ಉಳಿತಾಯ ಇದುವರೆಗೆ 24.46 ಕೋಟಿ ಇದೆ. ಉತ್ತಮ ನಿರ್ವಹಣೆ ಮಾಡಿದ ಸಂಘಗಳಿಗೆ ಬ್ಯಾಂಕ್‍ಗಳಿಂದ 204.16 ಕೋಟಿ ರೂ. ಸಾಲ ಕೊಡಿಸಲಾಗಿದೆ. ಉತ್ತಮ ಆರ್ಥಿಕ ವ್ಯವಹಾರ ನಡೆಸಿದ ಸಂಘಗಳಿಗೆ ಇಲ್ಲಿವರೆಗೆ ಎರಡು ಬಾರಿ ಲಾಭಾಂಶ ವಿತರಿಸಲಾಗಿದೆ. ಈಗ ಮೂರನೇ ಬಾರಿ ಲಾಭಾಂಶ ವಿತರಣೆ ಮಾಡಲು ಸಂಘ ಮುಂದಾಗಿದ್ದು 2703 ಸಂಘಗಳಿಗೆ 11 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಇದರೊಂದಿಗೆ ಸಂಘದ ಸದಸ್ಯ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ 1788 ವಿದ್ಯಾರ್ಥಿಗಳಿಗೆ 1.60 ಕೋಟಿ ಶಿಷ್ಯ ವೇತನ ನೀಡಲಾಗಿದೆ. 5 ಬಡ ಕುಟುಂಬಗಳಿಗೆ ವಾತ್ಸಾಲ್ಯ ಮನೆ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. 75 ಜನರಿಗೆ ತಲಾ ಮಾಸಿಕವಾಗಿ 1000 ರೂ.ಗಳನ್ನು ದುರ್ಬಲ ವರ್ಗದವರಿಗೆ ನೀಡಲಾಗುತ್ತಿದೆ. 239 ವಿಕಲ ಚೇತನರಿಗೆ ಅಗತ್ಯ ಉಪಕರಣ ನೀಡಲಾಗಿದೆ. ತಾಲ್ಲೂಕಿನಲ್ಲಿ 8 ಕೆರೆಗಳ ಹೂಳನ್ನು 55.99 ಲಕ್ಷ ರೂ,ಮೊತ್ತದಲ್ಲಿ ತೆಗೆಸಲಾಗಿದೆ ಎಂದರು.
ದಿನಾಂಕ 25.12.2024 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಲಾಭಾಂಶ ಪಡೆದ ಸ್ವ-ಸಹಾಯ ಸಂಘಗಳಿಗೆ ವಿತರಿಸುವರು.ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಸಂಸದ ಗೋವಿಂದ ಕಾರಜೋಳ, ಕೆರೆ ಸಮಿತಿಯವರಿಗೆ ಹಸ್ತಾಂತರಿಸಲಿದ್ದಾರೆ. ನಿರಾಶ್ರಿತ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು, ಇದರ ಹಸ್ತಾಂತರವನ್ನು ಮಾಜಿ ಸಚಿವ ಹೆಚ್. ಆಂಜನೇಯ, ಫಲಾನುಭವಿಗಳಿಗೆ ನೀಡುವರು. ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ವಿಧಾನ ಪರಿಷತ್ ಕೆ.ಎಸ್.ನವೀನ್. ಇವರು ನಡೆಸಲಿರುವರು. ಗ್ರಾಮಾಭಿವೃದ್ಧಿ ಯೋಜನೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಆಶಯ ಭಾಷಣವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್ ಇವರು ಮಾಡಲಿರುವರು.

 

 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷ ನಾಗರತ್ನ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕ ಸುಮಿತ್ರಕ್ಕ ಸೇರಿದಂತೆ ಪುರಸಭೆಯ ಸದಸ್ಯರು ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭೀವೃದ್ದಿ ಬಿ.ಸಿ.ಟ್ರಸ್ಟ್ ನ ನಿರ್ದೇಶಕರಾದ ದಿನೇಶ್ ಪೂಜಾರ್, ಯೋಜಣಾಧಿಕಾರಿಗಳಾದ ಸುರೇಂಧ್ರ ಆಚಾರ್, ಪ್ರಬಾಕರ್ ವಸಂತ್, ಮುಖಂಡರಾದ ರುದ್ರಪ್ಪ, ಪುರಸಭೆಯ ಮಾಜಿ ಅಧ್ಯಕ್ಷರಾದ ಅಶೋಕ್ ಗ್ರಾಮ ಪಂ ಮಾಜಿ ಅಧ್ಯಕ್ಷರಾದ ಡಿ,ಸಿ.ಮೋಹನ್, ರಮೇಶ್ ಗೌಡ್ರ ದುಮ್ಮಿ, ಸರಸ್ವತಿ, ಅಶೋಕ್ ಗಂಗಾಧರಪ್ಪ, ದೇವರಾಜ್ ಸಾಸಲು ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *