ಕಲುಷಿತ ನೀರು ಸೇವನೆ ಪ್ರಕರಣವನ್ನು ಮರು ತನಿಖೆ ಮಾಡಬೇಕು ಶೀಘ್ರವಾಗಿ ನ್ಯಾಯ ದೊರಕಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗು ಚಿತ್ರ ನಟ ಚೇತನ್ ಅಹಿಂಸ ಒತ್ತಾಯಿಸಿದ್ದಾರೆ. ಅವರು ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಅಸ್ವಸ್ಥ ಹಾಗೂ ಮೃತರ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ದುರ್ಘಟನೆ ಕಲುಷಿತ ನೀರಿನಿಂದ ಆಗಿದೆ ಎಂದು ಹೇಳುತ್ತಾರೆ.ದಲಿತರನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ ಎನ್ನುತ್ತಿದ್ದಾರೆ. ಸತ್ಯ ಹೊರ ಬರಬೇಕಾದರೆ ಪಾರದರ್ಶಕವಾಗಿ ತನಿಖೆಯಾಗಬೇಕು, ಕೇವಲ ಪರಿಹಾರ ನೀಡಿದ ಕೂಡಲೇ ಎಲ್ಲವು ಸರಿ ಹೋಗುವುದಿಲ್ಲ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಕುಡಿಯುವ ನೀರು ಸಂವಿಧಾನದ ಆರ್ಟಿಕಲ್ 21 ರಂತೆ ಮಾನವನ ಹಕ್ಕಾಗಿದೆ. ಕುಡಿಯುವ ನೀರಿಗಾಗಿ ಅಂಬೇಡ್ಕರ್ ಹೋರಾಟ ಮಾಡಿದ್ದಾರೆ. ಶುದ್ಧ ಕುಡಿಯುವ ನೀರನ್ನು ಕೊಡಬೇಕಿದೆ. ಜಿಲ್ಲಾಡಳಿತ ದಲಿತರನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಎಸ್ ಇ ಪಿ ಟಿಎಸ್ ಪಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸ್ಕೀಂಗಳಿಗೆ ಬಳಸಿಕೊಳ್ಳುತ್ತಿರುವುದು ದುರಂತ. ಚಿತ್ರದುರ್ಗದಲ್ಲಿ ನೂರಾರು ಶೋಷಿತರು ಮಾತ್ತ ಬಲಿಯಾಗುತ್ತಿದ್ದಾರೆ.ದಲಿತರು ಮತ, ಪ್ರಚಾರಕ್ಕೆ ಮಾತ್ರ ಬೇಕು,ಇಲ್ಲಿ ಸಾಯುವವರು ಮಾತ್ರ ದಲಿತರೇ ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಘಟನೆ ಸದಾಶಿವ ನಗರ ಡಾಲರ್ಸ್ ಕಾಲೋನಿಯಲ್ಲಿ ನಡೆದಿದ್ದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುತ್ತಿತ್ತು. ಸರ್ಕಾರ ಇದನ್ನು ಪಾರದರ್ಶಕವಾಗಿ ಮತ್ತು ಮರು ತನಿಖೆಗೆ ಆದೇಶ ಮಾಡಬೇಕು. ಮರು ತನಿಖೆ ಮಾಡುವುದು ತಪ್ಪಲ್ಲ,ಈ ಕೇರಿಯಲ್ಲಿ ಮಾತ್ರ ಘಟನೆ ನಡೆದಿದೆ. ಈ ಪ್ರಕರಣ ತುಂಬಾ ನಿಗೂಢವಾಗಿದೆ ಎಂದು ಹೇಳಿದರು.





