ಭಗವಂತನ ಸೇವೆಗಿಂತ ಬಡವರ ಕಣ್ಣೀರು ಒರೆಸುವ ಕಾರ್ಯ ಶ್ರೇಷ್ಠವೆಂದು ಸಂತ ಸೇವಾಲಾಲ್ ನಂಬಿದ್ದರೆಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು. ಅವರು ಇಂದು ಎನ್ ದೇವರಹಳ್ಳಿ ಗ್ರಾಮದಲ್ಲಿ ಸೇವಲಾಲ್ ಜಯಂತಿ ಉದ್ಘಾಟಿಸಿ ಮಾತಾಡಿ, ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತ ಸಮಾಜವೆಂದರೆ ಅದು ಬಂಜಾರ ಸಮುದಾಯಕ್ಕೆ ಸಾಂಸ್ಕೃತಿಕ ಮತ್ತು ಸ್ವಾಭಿಮಾನದ ದಿಕ್ಕನ್ನು ತೋರಿಸಿದವರು, ಶ್ರೀ ಸೇವಾಲಾಲ್ ಮಹಾರಾಜರು ಈ ಸಮಾಜದ ಮೂಲ ಪುರುಷರು ರಾಥೋಡು ಚೌಹಾಣ್ ಮತ್ತು ಪೊಮ್ಮಾರ್ ಈಗಲೂ ಕೂಡ ಈ ಜನಾಂಗವನ್ನು ಹಲವಾರು ಭಾಗಗಳಲ್ಲಿ ಇದೇ ರೀತಿ ಕರೆಯುತ್ತಾರೆ. ಶ್ರೀ ಕೃಷ್ಣನಿಗೆ ಕೊಳಲನ್ನು ನೀಡಿದ ಸಮಾಜ ಇದು, ಸೇವಾಲಾಲ ರು ಅದ್ಭುತ ಸಮಾಜ ಸೇವ ಕಾರ್ಯ ಕೈಗೊಂಡಿದ್ದರು. ಸಮಾಜವನ್ನು ಸಂಘಟಿಸಿದರು, ಈಗಲೂ ಈ ಸಮಾಜದವರು ಪ್ರಾಮಾಣಿಕರು ನಂಬಿಕಸ್ಥರು ಸ್ವಾಭಿಮಾನಿಗಳು ಅಷ್ಟೇ ಅಲ್ಲದೆ ಶ್ರಮಿಕರಿದ್ದಾರೆ.
ವಚನ ಸಾಹಿತ್ಯದ12ನೇ ಶತಮಾನದ ಬಸವಣ್ಣ ದಾಸ ಸಾಹಿತ್ಯದ ಕನಕದಾಸರು ಡಾ. ಬಿಆರ್ ಅಂಬೇಡ್ಕರ್ ಪೆರಿಯಾರ್ ನಾರಾಯಣ ಗುರು ಇವರೆಲ್ಲರ ಆದರ್ಶಗಳು ಕೂಡ ಶೋಷಿತ ಸಮುದಾಯ ಮತ್ತು ಬಡವರ ಕಣ್ಣೀರು ಒರೆಸುವ ಮಹತ್ಕಾರ್ಯವಾಗಿತ್ತು.ಈ ಮೂಲ ಪುರುಷರುಗಳ ಆದರ್ಶಗಳು ಸಿದ್ಧಾಂತಗಳು ಒಂದೆಡೆ ಇದ್ದರೆ, ಈ ಆದರ್ಶಗಳನ್ನ ಇಂದಿನ ಯುವ ಪೀಳಿಗೆ ಅಥವಾ ಈ ಸಮಾಜದ ಸೌಲಭ್ಯಗಳನ್ನು ಉಂಡಂತ ಜನಗಳು ಈ ಆದರ್ಶಗಳನ್ನು ಮೈಗೂಡಿಸಿಕೊಳ್ಳದೆ, ಸಮಾಜದಲ್ಲಿರುವ ಬಡವರ ಪರ ನಿಲ್ಲದಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದರು. ಹಾಗೆ ಬಂಜಾರ ಸಮಾಜದಲ್ಲಿ ಇನ್ನೂ ಹೆಚ್ಚು ಹೆಚ್ಚು ಸ್ವಾವಲಂಬಿ ಗಳಾಗಬೇಕು. ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ದಿಕ್ಕಿನಲ್ಲಿ ಇನ್ನು ಸಾಕಷ್ಟು ಅಭಿವೃದ್ಧಿಯಾಗುವ ಅಗತ್ಯತೆ ಇದೆ. ಸಾಮಾಜಿಕ ಮೌಢ್ಯತೆಗಳನ್ನು ತೊರೆಯಬೇಕು ಕುಟುಂಬದ ಪ್ರತಿಯೊಂದು ಮಗುವಿಗೂ ಉನ್ನತ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡುವ ಜೊತೆಗೆ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರ್ ಆಶಯಗಳನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಮಾ ಸುಭಾಷ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರತ್ನಮ್ಮ ರಾಜಣ್ಣ ಸಮಾಜದ ಮುಖಂಡ ಲಕ್ಷ್ಮಣ್ ನಾಯಕ್ ಕಲ್ಯಾಣ್ ಕುಮಾರ್ ಗ್ರಾಮ ಪಂಚಾಯ್ತಿ ಸದಸ್ಯ ಶಂಕರ್ ಮೂರ್ತಿ ಗ್ರಾಮ ಪಂಚಾಯತಿ ಸದಸ್ಯರಾದ ಕಾಟಯ್ಯ ಮುಂತಾದವರು ಉಪಸ್ಥಿತರಿದ್ದರು.





