ಸಚಿವ ಸ್ಥಾನಾಂಕ್ಷಿಗಳ ಪಟ್ಟಿ ಹಿಡಿದು ಹೋಗಿದ್ದ ಸಿಎಂ ಗೆ ನಡ್ಡಾ ಹೇಳಿದ್ದೇನು?

ದೇಶ ರಾಜಕೀಯ

ನವದೆಹಲಿ: ಸಚಿವ ಸಂಪುಟದ ವಿಚಾರಕ್ಕಾಗಿ   ಬಹಳ ನಿರೀಕ್ಷೆಯನ್ನು ಇಟ್ಟುಕೊಂಡು ಹೋಗಿದ್ದ  ಸಿಎಂ ಯಡಿಯೂರಪ್ಪ ಹೋದಂಗೆಯೇ ವಾಪಾಸ್ಸು ಬೆಂಗಳೂರಿಗೆ ಬರೀಗೈಯಲ್ಲಿ ಬಂದಿದ್ದಾರೆ.

What JP nadda has told to cm

 

 

 

ಉಪ ಚುನಾವಣೆಗಳಲ್ಲಿ ಜಯ ಭೇರಿ ಬಾರಿಸಿದ ಬೆನ್ನಲ್ಲೆ  ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿಕೆಯನ್ನು ನೀಡಿದ್ದ ಸಿಎಂ ಯಡಿಯೂರಪ್ಪ ಅದಕ್ಕಾಗಿ ಇಂದಿನ ಸಂಪುಟಸಭೆಯನ್ನು 10 ನಿಮಿಷಗಳಿಗೆ ಮೊಟಕು ಮಾಡಿ ಸಚಿವಾಂಕ್ಷಿಗಳ  ಪಟ್ಟಿ ಹಿಡಿದು ದೆಹಲಿಯಲ್ಲಿ ವರಿಷ್ಠರ ಭೇಟಿ‌ ಮಾಡಲು ಹೋಗಿದ್ದರು. ಹೋದಂತೆ ಭೇಟಿ ಮಾಡಿದ್ದು ಸಚಿವ ಪಟ್ಟಿಯನ್ನು ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ  ಜೆಪಿ ನಡ್ಡಾಗೆ ಕೊಟ್ಟಿದ್ದಾರೆ.   ಅದರೆ ಅಮಿತ್ ಷಾ  ಅವರನ್ನು ಭೇಟಿ‌ ಮಾಡಲು  ಸಾಧ್ಯವಾಗಿಲ್ಲ. ಇದರಿಂದ ಜೆಪಿ ನಡ್ಡಾ  ಮೂರು ದಿನಗಳ ನಂತರದಲ್ಲಿ ಈ ಬಗ್ಗೆ ತಿಳಿಸಲಾಗುತ್ತದೆ ಎಂದು  ನಡ್ಡಾ  ಯಡಿಯೂರಪ್ಪ ಅವರಿಗೆ ಹೇಳಿ ಬೆಂಗಳೂರಿಗೆ ಕಳುಹಿಸಿದ್ದಾರೆ.  ಈ ಫರ್ಮಾನನ್ನು ಹೊತ್ತು ಹೋದ ದಾರಿಗೆ ಸುಂಕವಿಲ್ಲ ಎಂದು ಸಿಎಂ ಯಡಿಯೂರಪ್ಪ ಹೋದಷ್ಟು ಸ್ಪೀಡಾಗಿ ಬೆಂಗಳೂರಿಗೆ ವಾಪಾಸಾಗಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *