ಚಿತ್ರದುರ್ಗ,ನ08(ಸಂವಾ)- ಶಿರಾ ಹಾಗೂ ರಾಜ ರಾಜೇಶ್ವರಿ ಕ್ಷೇತ್ರಗಳಲ್ಲಿ ನಡೆದಿರುವ ಉಪ ಚುನಾವಣೆಯ ಸಿ ಫೋರ್ ಸಮೀಕ್ಷೆಯಲ್ಲಿ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಚ್. ಎಂ ರೇವಣ್ಣ ಅಭಿಪ್ರಾಯಪಟ್ಟರು.
ಅವರು ಚಿತ್ರದುರ್ಗದ ಮುರುಘಾ ಮಠಕ್ಕೇ ಭೇಟಿ ನೀಡಿ ತಮ್ಮ 71 ನೇ ಹುಟ್ಟು ಹಬ್ಬದ ಸಮಯದಲ್ಲಿ ಆಶೀರ್ವಾದ ಪಡೆದರು. ನಂತರ ಕಾಗಿನೆಲೆ ಕಡೆಗೆ ಪ್ರಯಾಣ ಬೆಳೆಸುವಾಗ ದೂರವಾಣಿ ಮೂಲಕ ಸಂಯುಕ್ತ ವಾಣಿ ಜೊತೆ ಮಾತನಾಡುತ್ತಾ, ಸೀಫೋರ್ ಸಮೀಕ್ಷೆ ಮಾಡಿರುವವರು ಸಾರ್ವಜನಿಕರಿಗೆ ಕೇಳಿರುವ ಪ್ರಶ್ನೆಗಳು ಸರಿಯಾಗಿಲ್ಲ. ಅದ್ದರಿಂದ ಅದರಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಗೆ ಎರಡೂ ಕ್ಷೇತ್ರಗಳಲ್ಲಿ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಎಚ್. ಎಂ . ರೇವಣ್ಣ ಹೇಳಿದರು. ಈ ಸಮಯದಲ್ಲಿ ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು,ಶಫರ್ಡ್ ಇಂಟರ್ ನ್ಯಾಷನಲ್ ಕಾರ್ಯದರ್ಶಿ ಕುಮಾರ್ ಗೌಡ,ಪ್ರಧಾನಕಾರ್ಯದರ್ಶಿ, ನಾಗರಾಜ್,ಕೆಪಿಸಿಸಿ ಸದಸ್ಯರಾದ ನಾಗರಾಜ್ , ರಾಜಗುರು,ಕೇಶವಮೂರ್ತಿ ಚೇತನ್ ಇದ್ದರು. ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಎಚ್.ಎಂ. ರೇವಣ್ಣ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ