ಲಕ್ಷ್ಮಿ ಪೂಜೆಗೆಂದು ತೆಗೆದುಕೊಂಡು ಹೋಗುತ್ತಿದ್ದ 7 ಲಕ್ಷ ಕಳವು

ಕ್ರೈಂ

ಚಿತ್ರದುರ್ಗ: ಲಕ್ಷ್ಮಿ ಪೂಜೆಗೆ ತೆಗೆದುಕೊಂಡು ಹೋಗುತ್ತಿದ್ದ 07 ಲಕ್ಷ ರೂಪಾಯಿ ನಗದನ್ನು ದೋಚಿರುವ ಘಟನೆ ಹೊಳಲ್ಕೆರೆ ರಸ್ತೆಯ ಮೋರ್ ಮಾಲ್ ಬಳಿ ನಡೆದಿದೆ.

Chitradurga 7 lack theft

 

 

 

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಮೋರ್ ಬಳಿ ಭೀಮ ಸಮುದ್ರ ಮೂಲದ ಓಂಕಾರಪ್ಪ ಎಂಬುವವರು ಲಕ್ಷ್ಮಿ ಪೂಜೆಗೆಂದು 07 ಲಕ್ಷ ಹಣವನ್ನು ಎಸ್ ಬಿ ಐ ಬ್ಯಾಂಕಿನಲ್ಲಿ ನೋಟಗಳನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಂಡು ಬೈಕ್ ಹಿಂದೆ ಇಟ್ಟು ಮೋರ್ ಮಾಲಿನ ಬಳಿ ಕಿರಾಣಿ ಅಂಗಡಿಯಲ್ಲಿ ಚಾಕಲೇಟ್ ತರಲು ಹೋಗಿದ್ದ ವೇಳೆಯಲ್ಲಿ ಖತರ್ನಾಕ್ ಕಳ್ಳನೊಬ್ಬ ಹಣವನ್ನು ಎಗರಿಸಿಕೊಂಡು ಹೋಗಿದ್ದಾನೆ. ಇದು ಸಿಸಿ ಟೀವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಪೋಲಿಸ್ ಠಾಣೆ ಸಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *