ಮದುವೆ ಮನೆ ಬಾಡೂಟ ಸೇವಿಸಿ 70 ಜನ ಅಸ್ವಸ್ಥ

ರಾಜ್ಯ

ಮಗಳ ಮದುವೆಯ ಖುಷಿಯಲ್ಲಿ ಊರಿಗೆ ಬಾಡೂಟು ಮಾಡಿಸಿ ಉಣಿಸಿದ್ದು, ಊಟ ಮಾಡಿದವರಲ್ಲಿ ಸುಮಾರು 70 ಜನರು ಅಸ್ವಸ್ಥರಾದ ಘಟನೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಹಳೆ ಕುಂದೂರಿನಲ್ಲಿ ನಡೆದಿದೆ.
ರಂಗನಾಥ ಎಂಬುವವರು ಮಗಳ ಮದುವೆಯನ್ನು ಮುಗಿಸಿ ಬೀಗರ ಊಟ ಮಾಡಿಸಿ ಗ್ರಾಮಸ್ಥರಿಗೆ ಬಾಡೂಟ ಬಡಿಸಿದ್ದರು. ಬಾಡೂಟ ಸೇವಿಸಿದ ಗ್ರಾಮಸ್ಥರಲ್ಲಿ ಸುಮಾರು 70 ಜನರು ಅಸ್ವಸ್ಥರಾಗಿದ್ದು, ಜ್ವರ ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ. ಅಸ್ವಸ್ಥರಾದವನ್ನು ಹಳೇ ಕುಂದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಚಿಕಿತ್ಸೆಯನ್ನು‌ ನೀಡಲಾಗುತ್ತಿದ್ದು, ಅಸ್ವಸ್ಥರು ಚೇತರಿಸಿಕೊಳ್ಳುತ್ತಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಹೇಳಿದ್ದಾರೆ.

 

 

 

Leave a Reply

Your email address will not be published. Required fields are marked *