ಕೆಲ ಮಹನೀಯರು ಮಾಡುವ ಕೆಲಸ ಬೆಳಕಿಗೆ ಬರುವುದಿಲ್ಲ

ಜಿಲ್ಲಾ ಸುದ್ದಿ

ಹಲವು ಮಹನೀಯರು ಇರುವವರೆಗೂ ಅವರು ಮಾಡುವ ಪುಣ್ಯದ ಕೆಲಸ ಬೆಳಕಿಗೆಬರುವುದಿಲ್ಲಾ ,ಆದರೆ ಅಂತಹ ಮಹನೀಯರ ಸಾಲಿಗೆ ನಟ ಪುನೀತ್ ರಾಜ್ ಕುಮಾರ್ ಸೇರುತ್ತಾರೆ. ಪುನೀತ್ ರಾಜ್ ಕುಮಾರ್ ಅದೆಷ್ಟೋ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಬನಾಶ್ರೀ ಆಶ್ರಮದಲ್ಲಿ ಕಿಚ್ಚ ಸುದೀಪ್ ಜನ್ಮದಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ವೃದ್ದರಿಂದ ಕೆಕ್ ಕಟ್ ಮಾಡಿಸುವುದರ ಮೂಲಕ ಶುಭಕೋರಿ ಬನಾಶ್ರೀ ವೃದ್ದರ ಯೋಗಕ್ಷೇಮ ವಿಚಾರಿಸಿದರು.ಕಿಚ್ಚ ಸುದೀಪ್ ಅಭಿಮಾನಿ ಯುವ ಬಳಗ ಇವರ ವತಿಯಿಂದ ಕರುನಾಡ ಕಿಚ್ಚ ಸುದೀಪ್ ಜನ್ಮ ದಿನದ ಪ್ರಯುಕ್ತ ಇಂದು ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ದಾಶ್ರಮದಲ್ಲಿ ಕಿಚ್ಚ ಸುದೀಪ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಿಚ್ಚ ಸುದೀಪದ ಅಭಿಮಾನಿ ಯುವ ಬಳಗ ಕರೆಯ ಮೇರೆಗೆ ತಹಶೀಲ್ದಾರ್ ಎನ್.ರಘುಮೂರ್ತಿ ವೃದ್ದಾಶ್ರಮಕ್ಕೆ ಬೇಟಿ ನೀಡಿ ಅಲ್ಲಿ ವೃದ್ದರ ಯೋಗಕ್ಷೇಮ ವಿಚಾರಿಸಿದರು .ನಂತರ ಬೆಳೆಗಿನ ಉಪಹಾರ ವಿತರಿಸಿದರು.ವೃದ್ದರೊಂದಿಗೆ ಕಿಚ್ಚ ಸುದೀಪ್ ಜನ್ಮದಿನಾಚರಣೆ ಕೆಕ್ ಕಟ್ ಮಾಡುವುದರ ಮೂಕಲ ಕಿಚ್ಚ ಸುದೀಪ್ ಗೆ ಶುಭ ಹಾರೈಸಿ ಬನಾಶ್ರೀ ವೃದ್ದರ ಯೋಗಕ್ಷೇಮ ವಿಚಾರಿಸಿದರು.
ನಂತರ ಮಾತನಾಡಿದ ಅವರು ಜಾನುವಾರ ರಕ್ಷಣೆಗೆ ಗೋ ಶಾಲೆ ವೃದ್ದರ ಅನಕೂಲಕ್ಕೆ ,ವೃದ್ದಾಶ್ರಮ,ಬಡಮಕ್ಕಳವಿದ್ಯಾಭ್ಯಾಸ ಕ್ಕೆ ಶಾಲೆ,ಇನ್ನು ಹತ್ತು ಹಲವು ಸದಾ ಸಮಾಜಮುಖಿ ಕಾರ್ಯಗಳನ್ನ ಮಾಡಿಕೊಂಡು ಬಂದಿದ್ದು ಅವರು ಇರುವವರೆಗೂ ಅವರು ಮಾಡಿದ ಕಾರ್ಯ ಬೆಳಕಿಗೆ ಬಂದಿರಲಿಲ್ಲಾ ನಂತರವೇ ಅವರು ಸಾಧನೆ ಗೋತ್ತಾಗಿದ್ದೆ. ಹಾಗೆ ಕಿಚ್ಚಾ ಸುದೀಪ್ ರವರು ಸಹ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.ಹೀಗೆ ಅವರ ಕಾರ್ಯಮುಂದುವರೆಯಲಿ ಎಂದರು. ಈ ಸಮಯದಲ್ಲಿ ಕಿಚ್ಚ ಸುದೀಪ್ ಅಭಿಮಾನಿ ಯವ ಬಳಗದ ರಘು,
ಅನಿಲ್, ರಮೇಶ್, ಪಾಪಣ್ಣ, ಮಧು ವಿಶ್ವಮಂಜು,ನಿತಿನ್
,ತಿಪೇಶ್ ಹಾಗೂ ಬನಾಶ್ರೀ ವೃದ್ದಾಶ್ರಮದ ಮುಖ್ಯಸ್ಥರು ,ವೃದ್ದರು ಇದ್ದರು

 

 

 

Leave a Reply

Your email address will not be published. Required fields are marked *