ಒಗ್ಗೂಡಿ ಕೆಲಸ ಮಾಡಿದಲ್ಲಿ ಚಂದ್ರಪ್ಪ ಗೆಲುವು ಕಟ್ಟಿಟ್ಟ ಬುತ್ತಿ

ರಾಜಕೀಯ

ಜಿಲ್ಲೆಯ ಹೊಳಲ್ಕೆರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಳನ್ನು ಚಂದ್ರಪ್ಪ ಮಾಡಿದ್ದಾರೆ. ಕ್ಷೇತ್ರದ‌ ಎಲ್ಲಾ ಜನರು ಹೇಳುತ್ತಿದ್ದಾರೆ. ಕಾರ್ಯಕರ್ತರು ಬಿಜೆಪಿ‌ ಜೀವಾಳ. ನೀವುಗಳು ಚುನಾವಣೆಯಲ್ಲಿ ಒಗ್ಗೂಡಿ ಕೆಲಸ‌ ಮಾಡಿದಲ್ಲಿ ಚಂದ್ರಪ್ಪ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಗುಜರಾತ್ ಶಾಸಕ ಪ್ರಕಾಶ್ ವರ್ಮ ಹೇಳಿದರು. ಅವರು ಹೊಳಲ್ಕೆರೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಎಂ. ಚಂದ್ರಪ್ಪ, ಮೂರುವರೆ ವರ್ಷ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನರು ಮೆಚ್ಚುವ ಆಡಳಿತ ವನ್ನು ನೀಡಿದೆ. ಅದೇರೀತಿ ಹೊಳಲ್ಕೆರೆ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು‌ ಮಾಡಲಾಗಿದೆ.ಅಧಿಕಾರ ಶಾಶ್ವತವಾದದ್ದಲ್ಲ.ಅಧಿಕಾರ ಇದ್ದಾಗ ಜನರಿಗೆ ಒಳಿತಾ ಗುವ ಕೆಲಸಗಳನ್ನು ಮಾಡ ಬೇಕು. ಜನಸೇವೆಯೇ ಜನಾರ್ಧನನ ಸೇವೆ ಎಂಬ ನಿಲುವಿನೊಂದಿಗೆ ನಾನು ಕೆಲಸ ಮಾಡಿದ್ದೆನೆ. ಇದ ಕ್ಕಾಗಿಯೇ ಕ್ಷೇತ್ರದ ಜನರು ರಸ್ತೆ ರಾಜ ಎಂಬ ಬಿರು ದನ್ನು ಕೊಟ್ಟಿದ್ದಾರೆ.
೨೪ ಗಂಟೆ ವಿದ್ಯುತ್, ನೀರು ಕೊಡುವ ವ್ಯವಸ್ಥೆ ಮಾಡುತ್ತೇನೆ. ಇದಕ್ಕಾಗಿ ವಾಣಿವಿಲಾಸ ಸಾಗರ ದಿಂದ ನೀರು ತರಲು ಈಗಾಗಲೇ ಪೈಪ್ ಲೈನ್ ಮಾಡಿಸಲಾಗಿದೆ. ರಾಜ್ಯ ಹಾಗೂ ದೇಶದಲ್ಲಿ‌ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಕೆಲಸಗಳನ್ನು‌ ಮಾಡಿದೆ. ದೇಶದಲ್ಲಿ ಯಾರೋಬ್ಬರು ಹಸಿವಿನಿಂದ ಇರಬಾರದು ಎಂದು ಉಚಿತವಾಗಿ ಅಕ್ಕಿ ಕೊಡುವ ಕೆಲಸವನ್ನು ದೇಶದ ಪ್ರಧಾನಿ‌ ಮೋದಿ ಅವರು ಮಾಡಿದ್ದಾರೆ.
೨೪ ಸಾವಿರ ಕೋಟಿ ಬಜೆಟ್ ಇತ್ತು, ಇದರಲ್ಲಿ ಎಷ್ಟೇಲ್ಲ ಕೆಲಸ ಮಾಡಬ ಹುದಿತ್ತು. ಆದರೆ ಯಾವು ದೇ ಕೆಲಸವನ್ನು ಮಾಡ ಲಿಲ್ಲ, ಇಂತಹವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ೫೦ ಸಾವಿರ ಮತಗಳಿಂದ ನನ್ನನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

 

 

 

Leave a Reply

Your email address will not be published. Required fields are marked *