ಕಾಂಗ್ರೆಸ್ ತನ್ನ ಸಂಭಾವ್ಯಾಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದುಮತ್ತಷ್ಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹಿರಂಗವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದರ ನಡುವೆ ಬಿಜೆಪಿ ಕೂಡ ತನ್ನ ಮೊದಲ ಪಟ್ಟಿಯಾಗಿ ನೂರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ. ಯಡಿಯೂರಪ್ಪ ಈ ಮೊದಲು ಹೇಳಿದಂತೆ ಐದಾರು ಮಂದಿಗೆ ಟಿಕೆಟ್ ಕೈ ತಪ್ಪುವ ಸಂಭವವಿದೆ. ಇದರ ನಡುವೆ ಕೆಲವೊಂದು ಕಡೆ ಟಿಕೆಟ್ ಗಾಗಿ ತೀವ್ರ ಪೈಪೋಟಿಯೇ ಇದೆ. ಪ್ರತಿಷ್ಠಿತ ಕಣಗಳಲ್ಲಿ ಬಹುತೇಕ ಹಳೆ ಮುಖಗಳೇ ಇರಲಿವೆ. ಅದಲ್ಲದೆ ಜೆಡಿಎಸ್ ಕಾಂಗ್ರೆಸ್ ನಿಂದ ವಲಸೆ ಬಂದ ನಾಯಕರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ.
ರಮೇಶ್ ಜಾರಕಿಹೊಳಿ: ಗೋಕಾಕ್, ಡಾ. ಕೆ.ಸುಧಾಕರ್ : ಚಿಕ್ಕಬಳ್ಳಾಪುರ, ಆನಂದ್ ಸಿಂಗ್ ವಿಜಯಪುರ (ಹೊಸಪೇಟೆ), ಬಿಸಿ ಪಾಟೀಲ್ : ಹಿರೇಕೆರೂರು, ಶಿವರಾಂ ಹೆಬ್ಬಾರ್ : ಯಲ್ಲಾಪುರ,ಎನ್. ಮಹೇಶ್ : ಕೊಳ್ಳೆಗಾಲ,ಶ್ರೀಮಂತ ಪಟೀಲ್: ಕಾಗವಾಡ,ಎಸ್ ಟಿ ಸೋಮಶೇಖರ್: ಯಶವಂತಪುರ,ಬೈರತಿ ಬಸವರಾಜ್: ಕೆ ಆರ್ ಪುರಂ,ಕೆ. ಗೋಪಾಲಯ್ಯ: ಮಹಾಲಕ್ಷ್ಮಿ ಲೇಔಟ್,ಮುನಿ ರತ್ನ : ರಾಜ ರಾಜೇಶ್ವರಿ ನಗರ