ಸಚಿವ ಸಂಪುಟದ ಬಗ್ಗೆ ಸಿಎಂ ಬಿಎಸ್ವೈ ಏನು ಹೇಳಿದರು?

ರಾಜಕೀಯ

ಚಾಮರಾಜನಗರ: ಇನ್ನೆರಡು ದಿನಗಳಲ್ಲಿ  ಸಚಿವ ಸಂಪುಟ ವಿಸ್ತರಣೆಯೋ   ಪುನಾರಚನೆಯೋ ಎಂದು ತಿಳಿಯಲಿದೆ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.

Chitradurga cabinet expansion in two r three days

 

 

 

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಿಎಸ್ ವೈ ಮೇಲಿನಂತೆ ಹೇಳಿದ್ದಾರೆ.  ಕಳೆದ ಒಂದು ವಾರದ ಹಿಂದೆ ಸಚಿವ  ಸ್ಥಾನದ ಆಕಾಂಕ್ಷಿಗಳ ಪಟ್ಟಿ ಹಿಡಿದು ದೆಹಲಿಗೆ ಹೋಗಿದ್ದ ಸಿಎಂ ಬಿ ಎಸ್ ವೈಗೆ ವರಿಷ್ಠರು ಕಾಯುವಂತೆ ಹೇಳಿ ಕಳುಹಿಸಿದ್ದರು. ಅಂದಿನಿಂದ ಇಂದಿನವರೆಗೂ ವರಿಷ್ಠರ ಆದೇಶಕ್ಕಾಗಿ ಕಾಯುತ್ತಾ ಕುಳಿತಿರುವ ಸಿಎಂ ಬಿಎಸ್ ವೈ  ಸಂಪುಟ ವಿಸ್ತರಣೆಯೊ ಅಥವ ಪುನಾರಚನೆಗೆ ಅನುಮತಿ ಸಿಗುತ್ತದೋ ಎಂದು ಎದುರು ನೋಡುತ್ತಿದ್ದಾರೆ. ಇತ್ತ ಸಚಿವ  ಸ್ಥಾನದ ಆಕಾಂಕ್ಷಿಗಳು ಕೂಡ ವರಿಷ್ಠರ ಅದೇಶ ಏನು ಬರುತ್ತದೆ ಎಂದು ಯಾರ್ಯಾರಿಗೆ ಅವಕಾಶ ಸಿಗಲಿದೆ ಎಂದು ಕಾದು ನೋಡುತ್ತಿದ್ದು, ವರಿಷ್ಠರ ಅದೇಶ ಸಿಎಂಗೆ ಸಂಕಟಕ್ಕೀಡು ಮಾಡುತ್ತದೆಯೇ ಎಂಬ ಚರ್ಚೆ ನಡೆಯುತ್ತಿದೆ. ಜೊತೆಗೆ ಹಿರಿಯರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುತ್ತದೆಯೋ ಎಂದು ನೋಡಬೇಕಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *