BREAKING NEWS
ವಿವಾಹಿತ ಹೆಣ್ಣು ಮಕ್ಕಳಿಗೂ ಪೋಷಕರ ವಿಮಾ ಹಣದಲ್ಲಿ ಪಾಲಿದೆ ಎಂದು ಮಹತ್ವದ ತೀರ್ಪನ್ನು ನೀಡಿ ಆದೇಶಿಸಿದೆ. ಅಪಘಾತದಲ್ಲಿ ತಮ್ಮ ತಂದೆ ತಾಯಿಮರಣದ ನಂತರ ವಿಮಾ ಕಂಪನಿಗಳಿಂದ ಪರಿಹಾರದ ಹಣವನ್ನು ಪಡೆಯಲು ವಿವಾಹಿತ ಹೆಣ್ಣುಮಕ್ಕಳು ಆರ್ಹ ರಾಗಿದ್ದಾರೆ, ಎಂದು ನ್ಯಾಯಾಲಯ ಹೇಳಿದೆ.
ಸಾಂದರ್ಭಿಕ ಚಿತ್ರ
ವಿವಾಹಿತ ಪುತ್ರರು ಮತ್ತು ಹೆಣ್ಣುಮಕ್ಕಳು ಇಬ್ಬರೂ ಪೋಷಕರ ಮರಣದ ನಂತರ ಅವರ ವಿಮಾ ಹಣವನ್ನು ಪಡೆಯಲು ಆರ್ಹರಿರುತ್ತಾರೆ. ಎಂದುಹೈ ಕೋರ್ಟ್ ಹೇಳಿದ್ದು, ಇದಕ್ಕೆ ತಾರತಮ್ಯ ಮಾಡುವಂತಿಲ್ಲ ಎಂದು ಸೂಚಿಸಿದೆ.
ಹೈ ಕೋರ್ಟ್ ನ ನ್ಯಾಯಾಧೀಶರನ್ನೊಳಗೊಂಡ ಈ ಪೀಠದಲ್ಲಿ ವಿಮಾ ಕಂಪನಿ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಹೆಚ್. ಪಿ ಸಂದೇಶ್ ವಿಚಾರಣೆ ನಡೆಸಿದರು. ಇದೇ 2012 ರ ಏಪ್ರಿಲ್ 12 ರಂದು ಹುಬ್ಬಳ್ಳಿಯ ಯಮನೂರಿನ ಬಳಿ ಕಾರು ಅಪಘಾತದಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ಇದರಲ್ಲಿ ರೇಣುಕಾ ಸಾವನ್ನಪ್ಪಿದ್ದಾರೆ. ಪರಿಹಾರ ನೀಡುವಂತೆ ರೇಣುಕಾ ಅವರ ಪತಿ ಮೂವರು ಪತ್ರಿಯರು ಹಾಗೂ ಓರ್ವ ಪುತ್ರ ಒತ್ತಾಯಿಸಿದ್ದರು.