ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಹಣ ಕಳವು
ಹಿರಿಯೂರು ನಗರದ ಜನನಿಬಿಡ ಪ್ರದೇಶವಾದ ನೆಹರು ವೃತ್ತದಲ್ಲಿ ಬಿಇಓ ಕಚೇರಿ ಪಕ್ಕದಲ್ಲಿ ನೆಲೆಸಿರುವ ಶ್ರೀ ಹೆಬ್ಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯನ್ನು ಗುರುವಾರ ರಾತ್ರಿ ಹೊಡೆದಿರುವ ಕಳ್ಳರು ಹುಂಡಿಯಲ್ಲಿರುವ ಹಣ ಮತ್ತು ದೇವಾಲಯದ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ದೇವಾಲಯ ಟ್ರಸ್ಟ್ ಪದಾಧಿಕಾರಿಗಳು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ದೇವಾಲಯದ ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರಬಹುದು ಎಂದು ದೇವಾಲಯದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಟ್ರಸ್ಟ್ ನ ಸದಸ್ಯರು ತಿಳಿಸಿದ್ದಾರೆ