ಜನೌಷಧಿ ಅಂಗಡಿ‌ ಉದ್ಘಾಟಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಆರೋಗ್ಯ

ಧರ್ಮಪುರ ಹೋಬಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಯಾದ ಜನ ಔಷದಿ ಕೇಂದ್ರ ಆರಂಭ ಮಾಡಿರುವುದು ಸಂತೋಷ ಉಂಟು ಮಾಡಿದೆ ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.

 

 

 


ಹಿರಿಯೂರು ತಾಲೂಕು ಧರ್ಮಪುರ ಹೋಬಳಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಉದ್ಘಾಟನೆ ಮಾಡಿ ಮಾತನಾಡಿದರು
ಜನ ಔಷದಿ ಕೇಂದ್ರಕ್ಕೂ ಹಾಗೂ ಇತರೆ ಮೆಡಿಕಲ್ ಔಷದಿ ಕೇಂದ್ರಗಳಿಗೆ ಇರುವ ವ್ಯತ್ಯಾಸ ಈಗಾಗಲೇ ಡಾಕ್ಟರ್ ವೆಂಕಟೇಶ್ ತಿಳಿಸಿದ್ದಾರೆ. ಮೊದಲು ನಮ್ಮ ಆಹಾರ ಪದ್ಧತಿ ಇರಬಹುದು ಜೀವನ ಪದ್ಧತಿ ಇರಬಹುದು ವಿಭಿನ್ನವಾಗಿತ್ತು. ಹಿಂದೆ ಎಷ್ಟು ಬೇಕೋ ಅಷ್ಟು ಮಾತ್ರ ಭತ್ತವನ್ನು ಬೆಳೆಯುತ್ತಿದ್ದೇವು. ಕಾಲ ಬದಲಾದಂತೆ ಮನುಷ್ಯ ಆಹಾರದ ಬದಲಾವಣೆ ಶೈಲಿಯನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ವಿ.ವಿಶ್ವನಾಥ, ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮಿಕಾಂತ್, ಚಂಗಾವರ ಮಾರಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ, ಮಂಜುನಾಥ, ಖಂಡೇನಹಳ್ಳಿ ಅಧ್ಯಕ್ಷರಾದ ರಾಘವೇಂದ್ರ, ಮಾಜಿ ಅಧ್ಯಕ್ಷ ಎಂ.ಶಿವಣ್ಣ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್, ರಾಮಕೃಷ್ಣ, ಬಂಗಾರಪ್ಪ ಅಸ್ಲಾಂ ಪಾಷಾ, ಪುಟ್ಟರಾಜ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *