ವಿದ್ಯಾರ್ಥಿ ಶಾಲೆಗೆ ಗೈರು ಮನಬಂದಂತೆ ತಳಿಸಿದ ವ್ಯವಸ್ಥಾಪಕ ನಿರ್ದೇಶಕ ಆಸ್ಪತ್ರೆಗೆ ಸೇರಿದ ವಿದ್ಯಾರ್ಥಿ.
ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ಶಾರದ ಕಾನ್ವೆಂಟ್ ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿತೀನ್ ಎಂಬ ವಿದ್ಯಾರ್ಥಿ ಸುಮಾರು ಆರು ದಿನಗಳಿಂದ ಶಾಲೆಗೆ ಹೋಗದೆ ದೊಡ್ಡ ಉಳ್ಳಾರ್ತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಕಬ್ಬಡ್ಡಿ ಆಟ ಕಲಿತು, ಕಬ್ಬಡಿ ಆಟದಲ್ಲಿ ಪ್ರಥಮ ಬಹುಮಾನ ಪಡೆದು ಶಾರದ ಕಾನ್ವೆಂಟ್ ಗೆ ಕೀರ್ತಿ ತಂದಿದ್ದಾನೆ. ಕಬ್ಬಡ್ಡಿ ಆಟದ ವಿಚಾರವಾಗಿ ಹೆಚ್ಚಿನ ತರಬೇತಿ ಪಡೆಯಲು ಒಂದುವಾರ ಶಾಲೆಗೆ ಹೋಗಿಲ್ಲ ಎನ್ನಲಾಗಿದೆ. ಗುರುವಾರ ಶಾಲೆಗೆ ಹೋದಾಗ ಶಾಲೆಯ ಅನುಮತಿ ಪಡೆಯದೆ ನನಗೆ ಕೇಳದೆ ಹೋಗಿದ್ದೀಯ ಎಂದು ಕಾನ್ವೆಂಟ್ ಎಂ ಡಿ ಚಂದ್ರಪ್ಪ ವಿದ್ಯಾರ್ಥಿ ನಿತೀನ್ ಗೆ ಚನ್ಬಾಗಿ ಥಳಿಸಿದ್ದಾರೆ. ಈ ವಿಷಯವನ್ನು ತಂದೆ ತಾಯಿ ಬಳಿ ಹೇಳದೆ ನೋವನ್ನುಂಡು ಸುಮ್ಮನಾಗಿದ್ದಾನೆ. ಶುಕ್ರವಾರ ವಿದ್ಯಾರ್ಥಿಗೆ ಚಳಿ .ಜ್ವರ. ನಡುಕ ಬಂದು ಭಯದಿಂದ ನಡಗುತ್ತಿರುವುದನ್ನು ಕಂಡು ತಕ್ಷಣ ಚಳ್ಳಕೆರೆ ನಗರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ ಆಗ ವಿದ್ಯಾರ್ಥಿ ತಂದೆ ತಾಯಿ ಬಳಿ ಶಾಲೆಯ ಎಂ ಡಿ ಚಂದ್ರಪ್ಪ ಗುರುವಾರ ಹೊಡೆದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ವಿದ್ಯಾರ್ಥಿಯ ಮಾವ ನಾಗರಾಜ್ ಶುಕ್ರವಾರ ರಾತ್ರಿ 10.30 ರ ಸುಮಾರಿನಲ್ಲಿ ಮಗುವಿಗೆ ಹೊಡೆದಿರುವ ಶಾಲೆಯ ಎಂ ಡಿ ಚಂದ್ರಪ್ಪ ಇವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.