BIG BREAKING
ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮುರುಘಾ ಶರಣರನ್ನು ಬಂಧಿಸಿದ್ದೇವೆ ಎರಡನೇ ಆರೋಪಿಯಾಗಿರುವ ಅಶ್ವಿನಿಯವರನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಎಸ್ಪಿ ಪರುಶುರಾಂ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಉಳಿದ ಮೂವರು ಆರೋಪಿಗಳಿಗೆ ನಾವು ನೋಟಿಸ್ ನೀಡಿಲ್ಲ ಹಾಗೂ ಕರೆದಿಲ್ಲ, ಅವರ ಬಗ್ಗೆ ನಮಗೆ ಮಾಹಿತಿ ಇಲ್ಲ, ಬಸವೇಶ್ವರ ಅಸ್ಪತ್ರೆಯ ಅಧೀಕ್ಷಕರಾದ ಡಾ. ಫಾಲಾಕ್ಷಪ್ಪ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ ಪರುಶುರಾಂ ನಮ್ಮ ಗಮನಕ್ಕೆ ಬಂದಿಲ್ಲ, ಏನಾದ್ರೂ ಹಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೆವೆ. ವೈದ್ಯಕೀಯ ಪರೀಕ್ಷೆಯ ನಂತರ ಸ್ವಾಮೀಜಿಯವರನ್ನು ನಾವು ನ್ಯಾಯಾಧೀಶರ ಬಳಿಕರೆದುಕೊಂಡು ಹೋಗುತ್ತೇವೆ. ನಾಳಿನ ಪರಿಸ್ಥಿತಿ ನಿಭಾಯಿಸಲು ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.