ಶಾಸಕ ಬಿ.ಆರ್. ಪಾಟೀಲ್ ರ ಪತ್ರ ಕೈ ಸೇರಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಸಕ ಬಿ.ಆರ್. ಪಾಟೀಲ್ ಅವರು ಬರೆದಿರುವ ಪತ್ರ ನನ್ನ ಕೈಸೇರಿಲ್ಲ. ಬಂದ ಮೇಲೆ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಅಧಿವೇಶನದಲ್ಲಿ ಕೆ.ಆರ್.ಡಿ.ಐ.ಎಲ್ ನಿಂದ ಭೂ ಸೇನೆಗೆ ಕಾಮಗಾರಿ ನೀಡುವ ವಿಚಾರದಲ್ಲಿ ಸಚಿವರಿಂದ ಅವಮಾನವಾಗಿದೆ, ತನಿಖಾ ಸಂಸ್ಥೆಗೆ ಪ್ರಕರಣ ವಹಿಸದಿದ್ದರೆ ರಾಜೀನಾಮೆ ಕೊಡುವುದಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.
ವರಿಷ್ಠ ರಿಗೆ ಅಂತಿಮ ಪಟ್ಟಿ
ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಪಕ್ಷದ ವರಿಷ್ಠರಿಗೆ ಅಂತಿಮ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಅವರು ಒಪ್ಪಿಗೆ ನೀಡಿದ ನಂತರ ನೇಮಕಾತಿ ನಡೆಯಲಿದೆ ಎಂದರು.