ನಿವೃತ್ತ ಡಿಎಆರ್ ಪೋಲೀಸ್ ಆಧಿಕಾರಿ ಡಿ.ಮಲ್ಲಿಕಾರ್ಜುನಯ್ಯ ನಿಧನ.
ಚಿತ್ರದುರ್ಗ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಿರೆಹಳ್ಳಿಯ ದಿವಂಗತ ಪೊಲೀಸ್ ದೊಡ್ಡಯ್ಯ ಮತ್ತು ದಿವಂಗತ ಬೊಸಮ್ಮ ಇವರ ಮಗ ನಿವತ್ತ ಡಿಎಆರ್ ಪೊಲೀಸ್ ಆಧಿಕಾರಿ ಡಿ. ಮಲ್ಲಿಕಾರ್ಜುನಯ್ಯ. 70 ವರ್ಷ ಅವರು 12.02.2023ರ ಭಾನುವಾರ ಬೆಳಿಗ್ಗೆ 8:30 ಸಮಯದಲ್ಲಿ ಚಿತ್ರದುರ್ಗ ದ ಅವರ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾದರು.
ಮೃತರು ಇಬ್ಬರು ಪತ್ನಿ, ಮೂವರು ಪುತ್ರಿ, ಮೂವರು ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ: ಸೋಮವಾರ ಬೆಳ್ಳಗೆ ೧೦ ಗಂಟೆ ಸಮಯಕ್ಕೆ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜ್ ಹಿಂಭಾಗದ ಯಂಗಮ್ಮನ ಕಟ್ಟೆ ಪ್ರದೇಶದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ನಿಂಗಪ್ಪ , ನಿವೃತ್ತ ಕೆ.ಇ.ಬಿ ಆದಿಕಾರಿ ಚಿತ್ರದುರ್ಗ ಇವರು ಅವರ ಮಲ್ಲಿಕಾರ್ಜುನ್ ಇವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ದೇವರು ಬರೆಸಲಿ ಎಂದು ಹೇಳಿದ್ದಾರೆ ಮತ್ತು
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್. ಆಂಜನೇಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದು
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.