Chitradurga ramulu vagdali

ಸಿದ್ದರಾಮಯ್ಯ ವಿರುದ್ಧ ರಾಮುಲು ವಾಗ್ದಾಳು

ಆರೋಗ್ಯ

ಚಿತ್ರದುರ್ಗ ಸಿದ್ದರಾಮಯ್ಯ ಸರ್ಕಾರವನ್ನು ಪದೇ ಪದೇ ಅನೈತಿಕ ಸರ್ಕಾರ ಎಂದು ಹೇಳಿಕೆ ಕೊಡುತ್ತಿದ್ದು, ಅವರಿಗೆ ನೈತಿಕ ಹಾಗೂ ಅನೈತಿಕ ಎಂದು ಹೇಳುವ ನೈತಿಕತೆ ಇಲ್ಲ ಅವರು ಅಧಿಕಾರ ಕಳೆದುಕೊಂಡು ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಮದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಿಡಿ ಕಾರಿದ್ದಾರೆ.

 

 

 

Chitradurga ramulu vagdali
ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಸಮ್ಮಿಸ ಮ್ಮಿಶ್ರ ಸರ್ಕಾರ ಇದ್ದಾಗ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿದರು. ನಂತರ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಿದರು. ಇಂತವರು ಅನೈತಿಕತೆ ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಪುಕ್ಕಟೆ ಪ್ರಚಾರ ಬೇಕಾಗಿದೆ. ಮತಿ ಭ್ರಮಣೆಯಾಗಿದೆ ಎಂದು ಅನಿಸುತ್ತಿದೆ. ಅದಕ್ಕೆ ಈ ರೀತಿ ಹೇಳಿಕೆ‌ ನೀಡುತ್ತಾ, ಇದೀಗ ಯಡಿಯೂರಪ್ಪ ಅವರನ್ನು ಇಳಿಯುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ಹಿರಿಯರು ಒಕ್ಷ ಕಟ್ಟಿ ಬೆಳೆಸಿದವರು ಇಂತವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಬಿಡಿದು ಮಾತನಾಡಬೇಕು ಎಂದು ಹರಿ ಹಾಯ್ದರು.
ಇನ್ನು ಯತ್ನಾಳ್ ಬಗ್ಗೆ ಅವರು ಹಿಟ್ ಅಂಡ್ ರನ್ ಹೇಳಿಕೆ ಕೊಡುವುದರಲ್ಲಿ ಅರ್ಥವಿಲ್ಲ. ಅವರ ಹೇಳಿಕೆಗಳಿಗೆ ಸಮರ್ಥನೆ ನೀಡುವ ಅಗತ್ಯವಿಲ್ಲ. ಆದರೂ ಕೂಡ ಅವರಿಗೆ ಇಂತಹ ಸಿಡಿಯಂತಹ ಹಗರಣಗಳು ಎಂದು ಹೇಳಿಕೆ ನೀಡುತ್ತಿರುವುದು ಶೋಭೆ ತರುವುದಿಲ್ಲ ಈಗಾಗಲೇ ಅಮಿತ್ ಶಾ ಹಾಗೂ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *