ಮಾಜಿ ಡಿಸಿಎಂ ಗೋವಿಂದ ಕಾರಜೋಳ ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ನೆಡೆಸುತ್ತಿದ್ದ ಪತ್ರಿಕಾ ಗೋಷ್ಠಿಯಲ್ಲಿ ಬಂದು ಗಲಾಟೆ ಮಾಡಿದ್ದ ಮಾದಿಗ ಮಹಾ ಸಭಾದ 8 ರಿಂದ 10 ಜನರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಕಾರಜೋಳರ ಅಂಗರಕ್ಷಕ ಶ್ರೀ ಶೈಲ ದೂರು ನೀಡಿದ್ದಾರೆ. ಮಾದಿಗ ಮಹಾ ಸಭಾದ ಮುಖಂಡರಾದ ಹನುಮಂತಪ್ಪ ದುರ್ಗಾ, ಗಂಗಾಧರ, ದೇವರಾಜ್ ಜೆಜೆ ಹಟ್ಟಿ ಸತೀಶ್, ಮುನಿಯ ಸೇರಿದಂತೆ 10 ಜನ ಮೇಲೆ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.