ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಧೀಶರು

ಕ್ರೈಂ

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೋಳಿ ಪ್ರೇಮವತಿ ಅವರು

 

 

 

ಆಕ್ಸಲ್ ಬ್ಲೇಡಿನಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದ ಆರೋಪಿಗಳಿಗೆ ಜೀವಾವಧಿ‌ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.
ಕಳೆದ ಮೂರು‌ ವರ್ಷಗಳ ಹಿಂದೆ ನಗರದ ತಿಪ್ಪಾರೆಡ್ಡಿ ಬಡಾವಣೆಯಲ್ಲಿ ಸಾಲ ಕೊಟ್ಟಿದ್ದನ್ನು ಕೇಳಿದ ಕಾರಣಕ್ಕೆ ಸಾದತ್ ಎಂಬ ವ್ಯಕ್ತಿಯನ್ನು ಮುಜಾಹಿದ್ ಭಾಷ ಮತ್ತು ಮಹಮದ್ ಷರೀಫ್ ಇಬ್ಬರು ಸೇರಿ ಕೊಲೆ ಮಾಡಿದ್ದರು. ಪ್ರಕರಣವನ್ನು ಕೋಟೆ ಠಾಣೆಯಲ್ಲಿ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು, ಸಿಪಿಐ ಪ್ರಕಾಶ್ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಎರಡು ವರ್ಷಗಳು ನ್ಯಾಯಾಲಯದಲ್ಲಿ ವಾದ ಪ್ರತಿ ವಾದಗಳು ನಡೆದಿದ್ದವು. ಇಂದು ನ್ಯಾಯಾಧೀಶರು ವಾದ ಪ್ರತಿ ವಾದಗಳನ್ನು ಆಲಿಸಿದ್ದು, ಆರೋಪಿಗಳು ಆಕ್ಸಲ್ ಬ್ಲೇಡಿನಿಂದ ಇರಿದು ಕೊಲೆ ಮಾಡಿದ್ದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮನಗೋಳಿ ಪ್ರೇಮಾವತಿ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪನ್ನಿತ್ತಿದ್ದಾರೆ.

Leave a Reply

Your email address will not be published. Required fields are marked *