ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಏನಂದ್ರು ಮಾಜಿ ಸಿಎಂ

ರಾಜ್ಯ

 

 

 

 

ಚಿತ್ರದುರ್ಗದ  ಲೋಕಸಭಾ ಟಿಕೆಟ್ ಯಾರಿಗೆಂದು  ಇಷ್ಟರಲ್ಲೆ ಘೋಷಣೆಯಾಗಲಿದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.‌ಅವರು
ಚಿತ್ರದುರ್ಗದ ಮಾದಾರ ಚನ್ನಯ್ಯ ಶ್ರೀಗಳ ಮಠಕ್ಕೆ ಭೇಟಿ‌ ಕೊಟ್ಟು ಅಶೀರ್ವಾದ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ಶ್ರೀ ಮಠಕ್ಕೆ ಆಗಾಗ್ಗೆ ಭೇಟಿ‌ ಕೊಡುತ್ತಿರುತ್ತೇನೆ. ಹಾಗೆ ಇಂದು‌ ಕೊಟ್ಟಿದ್ದೇನೆ. ಈ ಮೊದಲು ಚುನಾವಣೆ ಪೂರ್ವದಲ್ಲಿ‌ ಆಶೀರ್ವಾದ ಪಡೆದುಕೊಂಡಿದ್ದೆ ಎಂದರು.ಚಿತ್ರದುರ್ಗದ ಟಿಕೆಟ್ ಘೋಷಣೆಯಾಗುವುದು ಬಾಕಿ‌ ಇದೆ. ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಬೋರ್ಡ್ ಕಮಿಟಿಯ ಸಬ
ಭೆ ನಡೆಯಲಿದ್ದು, ನಾಳೆ ನಾಡಿದ್ದರಲ್ಲಿ ಉಳಿದ ಎಲ್ಲಾ ಸ್ಥಾನಗಳ ಟಿಕೆಟ್ ಮತ್ತು ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದರು. ಮಾದಾರ ಚನ್ನಯ್ಯ ಶ್ರೀಗಳ ಹೆಸರು ಕೇಳಿ‌ ಬರುತ್ತಿದೆ ಎಂಬ ಪ್ರಶ್ನೆಗೆ, ಯಾವುದೇ ಚರ್ಚೆ ಆಗುತ್ತಿಲ್ಲ.‌ಇದರ ಬಗ್ಗೆ ನನಗೆ ಮಾಹಿತಿ‌ ಇಲ್ಲ. ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಡದೆ ಹೊಸಬರಿಗೆ ಟಿಕೆಟ್ ಕೊಡುವ ವಿಚಾರ ‌ಕೇವಲ ಊಹಾ ಪೋಹ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ‌ ಮೇಲೆಯೇ ಅದು ಗೊತ್ತಾಗಲಿದೆ. ಈಶ್ವರಪ್ಪ ಅವರ ಜೊತೆಗೆ ನಾನು ವರಿಷ್ಟರು ಮಾತಾಡಿದ್ದೇವೆ ಎಲ್ಲವೂ ಸರಿಯಾಗಲಿದೆ. ಶ್ರೀ‌ಮಠದ ಬೆಂಬಲ‌ ಕೋರಿ‌ ನಾನು ಬಂದಿಲ್ಲ.‌ನಾನು 35 ವರ್ಷ ರಾಜಕಾರಣ ಮಾಡಿದ್ದೇನೆ. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ‌ ಭೇಟಿ ಮಾಡಿದ್ದೇನೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದೆ, ಈಗ ಎಂಪಿ ಟಿಕೆಟ್ ಕೊಟ್ಟಿದ್ದಾರೆ. ನಮ್ಮ ಪಕ್ಷದಲ್ಲಿ ನಿಷ್ಠಾವಂತರಿಗೆ ಟಿಕೆಟ್ ನೀಡಿದ್ದೇವೆ. ಯಡಿಯೂರಪ್ಪ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಈಗಾಗಲೇ ಗೃಹ ಮಂತ್ರಿಗಳು ಮಾತಾಡಿದ್ದಾರೆ,ತನಿಖೆ ನಡೆಸುತ್ತೇವೆ ಎಂದಿದ್ದಾರೆ. ರಾಜಕಾರಣದಲ್ಲಿ ಅವರ ಮೇಲೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ಯಾವುದೇ ಸದುದ್ದೇಶವಿಲ್ಲ ತನಿಖೆಯಲ್ಲಿ ಸತ್ಯ ಹೊರ ಬರಲಿದೆ. ಚುನಾವಣೆ ಸಮಯದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ,ಆದರೆ ಸತ್ಯಕ್ಕೆ ಜಯ ಸಿಗಲಿದೆ ಎಂದರು.

Leave a Reply

Your email address will not be published. Required fields are marked *