ಅಸ್ವಸ್ಥ ಮಗ ಸತ್ತೆ ಹೋಗಿದ್ದಾನೆಂದುಕೊಂಡಿದ್ದ ಮಗ ಸಿಕ್ಕಾಗ

ರಾಜ್ಯ

ಅಸ್ವಸ್ಥ ಮಗ ಸತ್ತೆ ಹೋಗಿದ್ದಾನೆ ಎಂದು ಕೊಂಡ ಪೋಷಕರಿಗೆ ಅಚ್ಚರಿಯ ವಿಷಯವೊಂದು ಕಾದಿತ್ತು. ಅದರಂತೆ ಅವರಿಗೆ ಚಿತ್ರದುರ್ಗ ನಿರಾಶ್ರಿತರ ಕೇಂದ್ರದಿಂದ ತಮ್ಮ ಮಗ ಇಲ್ಲಿದ್ದಾನೆ ಬಂದು‌ಕರೆದುಕೊಂಡು ಹೋಗಿ ಎಂದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ, ಸ್ವರ್ಗವೇ ಧರೆಗಿಳಿದು‌ ಬಂದಂತಾಗಿತ್ತು.
ಮಡಕಶಿರಾ ತಾಲೂಕಿನ ಹಿರೇ ತುರ್ಪಿ ಗ್ರಾಮ ಹನುಮಂತರಾಯ ಮಾನಸಿಕ‌ ಅಸ್ವಸ್ಥ ಇವನು ಕಳೆದ 11 ವರ್ಷಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದನು. ಪೋಷಕರು ಇವನಿಗಾಗಿ‌ ಹುಡುಕದ ಜಾಗವಿಲ್ಲ, ಎಲ್ಲೆಡೆಯೂ ಹುಡುಕಿದ್ದರು, ಸಿಗದಿದ್ದಾಗ ಸತ್ತೆ ಹೋಗಿದ್ದಾನೆ ಎಂದು ನಂಬಿ ಸುಮ್ಮನಾಗಿದ್ದರು. ಆದರೆ ಅದೃಷ್ಟವಶಾತ್ ಸಮಯ ಕಳೆದಂತೆ ಅವನು ಚಿತ್ರದುರ್ಗ ತಾಲೂಕಿನ ಗೋನೂರಿನಲ್ಲಿ‌ ನಿರಾಶ್ರಿತರ ಕೇಂದ್ರದ ಅಧಿಕಾರಿ ಕೈಗೆ ಸಿಕ್ಕಿದ್ದ ಅವರು ಇವನನ್ನು ಕರೆದುಕೊಂಡು ಬಂದು‌ ನಿರಾಶ್ರಿತರ ಕೇಂದ್ರದಲ್ಲಿ ಹಾರೈಕೆ ಮಾಡುತ್ತಿದ್ದರು. ಮಾತಾಡದ ಇವನಿಂದ ಮನೆಯ ವಿಳಾಸ ತಿಳಿಯಲು ಸಾಕಷ್ಟು ಪ್ರಯತ್ನ ನಡೆಸಿದ್ದರು, ಕೊನೆಗೆ ಅವನ ಕೈ ಮೇಲಿನ ಅಚ್ಚೆ ನೋಡಿ‌ ಅವನ ಪೋಷಕರ ವಿಳಾಸವನ್ನು ಅದ್ಹೇಗೋ ಪತ್ತೆ ಹಚ್ಚಿ ಪೋಷಕರಿಗೆ ಮಗ ಇಲ್ಲಿರುವ ವಿಚಾರ ತಿಳಿಸಿದ್ದಾರೆ. ಇದನ್ನು‌ ನಂಬದ ಪೋಷಕರು ಮಗನ ಫೋಟೋ‌ ತರಿಸಿಕೊಂಡು ನೋಡಿದ್ದಾರೆ. ಆ ನಂತರ ಅವರಿಗೆ ನಂಬಿಕೆ ಬಂದಿದ್ದು, ಮಗನಿಗಾಗಿ ತುದಿಗಾಲಿನಲ್ಲಿ ಚಿತ್ರದುರ್ಗದ ಗೋನೂರಿನ ನಿರಾಶ್ರಿತರ ಕೇಂದ್ರಕ್ಕೆ ಸಹೋದರ ಸಹೋದರಿ ಹಾಗೂ ಪೋಷಕರು ಬಂದಿದ್ದಾರೆ. ಅವನನ್ನು ಕಣ್ಣಾರೆ ನೋಡಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೇಂದ್ರದ ಅಧಿಕಾರಿ‌ ಮಹದೇವ್ ಅವರಿಗೆ ಕೋಟಿ‌ ನಮನ. ಸಲ್ಲಿಸುವ ಮೂಲಕ ಮಗನನ್ನು ಕರೆದುಕೊಂಡು ಸಂಭ್ರದಿಂದ ಮನೆಗೆ ಹೋಗಿದ್ದ ದೃಶ್ಯ ನೋಡುಗರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.

 

 

 

Leave a Reply

Your email address will not be published. Required fields are marked *