ಸರ್ಕಾರ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ಪ್ರತಿಯೊಂದು ಗ್ರಾಮ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಟ್ಟಿಗಳು ಮತ್ತು ಆರ್ ಓ ಪ್ಲಾಂಟ್ ಗಳನ್ನು ಹಾಕಿಸಿದ್ದು, ಅವುಗಳ ಸ್ವಚ್ಚತೆಯು ಕೂಡ ಸರಿಯಾಗಿ ಆಗುತ್ತಿರಲಿಲ್ಲ. ಕಾಲ ಕಾಲಕ್ಕೆ ಸ್ವಚ್ಚಗೊಳಿಸದೆ ಅವುಗಳು ಕೆಟ್ಟು ಜನರಿಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ದಿವಾಕರ್ ಅವರು ಕಳೆದ ಆರು ತಿಂಗಳ ಹಿಂದೆ ಆರ್ ಓ ಪ್ಲಾಂಟ್ ಮತ್ತು ಕುಡಿಯುವ ನೀರಿನ ತೊಟ್ಟಿಗಳ ಸ್ವಚ್ಚತಾ ಅಭಿಯಾನ ಆರಂಭಿಸಿದ್ದರು. ಆದರೆ ಅವುಗಳ ಅಭಿಯಾನವು ಚುನಾವಣೆ ಹಾಗು ಕೆಲಸಗಳ ಒತ್ತಡದಿಂದ ತಾತ್ಕಾಲಿಕವಾಗಿ ತಡೆಯಾಗಿತ್ತು. ಆದರೆ ಇಂದು ಮತ್ತೆ ಸ್ವಚ್ಚತಾ ಸಿಇಓ ನೇತೃತ್ವದಲ್ಲಿ ಅಭಿಯಾನ ಆರಂಭಗೊಂಡಿದೆ. ಚಿತ್ರದುರ್ಗ ತಾಲೂಕಿನ ಜಸನುಕೊಂಡ ಗ್ರಾಮ ಪಂಚಾಯಿತಿ ತೊಟ್ಟಿಗಳು ಮತ್ತು ಆರ್ ಓ ಪ್ಲಾಂಟ್ ಗಳನ್ನು ಸ್ವಚ್ಚಗೊಳಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಜನ ಜಾನುವಾರುಗಳಿಗೆ ಸ್ವಚ್ಚವಾದ ಕುಡಿಯುವ ನೀರು ಸಿಗುವಂತಾಗಿದೆ ಎಂದು ಗ್ರಾಮಸ್ಥರುಗಳು ಸಂತಸ ವ್ಯಕ್ತಪಡಿಸಿದ್ದಾರೆ.