ಜಿಲ್ಲಾ ಸುದ್ದಿ

ಚಿಕ್ಕಬಳ್ಳಾಪುರ : ಆರೋಗ್ಯ ಸಚಿವ ಡಾ. ಸುಧಾಕರ್ ತವರೂರಿನ ಬಳಿಯ ಹಿರೇನಾಗವಲ್ಲಿ ಗ್ರಾಮದ ಬಳಿ  ಕಲ್ಲು ಕ್ವಾರಿಯಲ್ಲಿ ಜೆಲಿಟಿನ್  ಸ್ಪೋಟ ದುರಂತದಲ್ಲಿ 6 ಜನರು ಮೃತಪಟ್ಟು ಓರ್ವ ತೀವ್ರಗಾಗೊಂಡ ಘಟನೆ ನಡೆದಿದೆ.

 

 

 

Chitradurga jalitin blast 6 death

ಶಿವಮೊಗ್ಗ ತಾಲೂಕಿನ ಹುಣಸೋಡು ಕಲ್ಲು ಕ್ವಾರಿಯ ಸ್ಪೋಟದ ನಂತರ ಇದು ಚಿಕ್ಕಬಳ್ಳಾಪುರ ಗ್ರಾಮದ  ಹಿರೇನಾಗವಲ್ಲಿ  ಗ್ರಾಮದಲ್ಲಿ ಆಂಧ್ರ ಮೂಲದ ಇಬ್ಬರು ಹಾಗೂ ಗುಡಿಬಂಡೆಯೊಬ್ಬರಿಗೆ ಸೇರಿದ ಕ್ವಾರಿಗಳು ಎಂದು ತಿಳಿದು ಬಂದಿದೆ.
ಈ ದುರ್ಘಟನೆ ನಡೆದಿದೆ. ಘಟನೆ ವಿಚಾರ  ತಿಳಿಯುತ್ತಿದ್ದಂತೆ  ಸಚಿವ ಡಾ. ಸುಧಾಕರ್, ಜಿಲ್ಲಾಧಿಕಾರಿ  ಲತಾ ಕೂಡ ಭೇಟಿ‌ ನೀಡಿದ್ದು, ಪೋಲಿಸರು ಘಟನೆಯಲ್ಲಿ ಗಂಗೋಜಿರಾವ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.  ಸ್ಥಳಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಹಾಗೂ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಎಲ್ಲ ಮಾಹಿತಿಯನ್ನು ಪಡೆದು ಸಿಎಂಗೆ ರವಾನಿಸಿದ್ದು, ಪ್ರಕರಣವನ್ನು  ಸಿಐಡಿಗೆ ನೀಡಿದ್ದು, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕೂಡ  ಅಂತವರ  ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸಂಯುಕ್ತ ವಾಣಿ

Leave a Reply

Your email address will not be published. Required fields are marked *