ಚಿತ್ರದುರ್ಗ,ಮೇ16(ಹಿಸ)- ನಾನೊಬ್ಬ ಜವಾಬ್ದಾರಿಯುತ ಶಾಸಕ ನಾನು 50 ಹಾಸಿಗೆಯುಳ್ಳ ಆಕ್ಸಿಜನ್ ಆಸ್ಪತ್ರೆ ಬೇಕು ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
ಸಾಯೋರು ಎಲ್ಲಿಯಾದರೂ ಸಾಯಲಿ ಎಂದು ಎಂಬ ಹೇಳಿಕೆಗೆ ಈ ಮೇಲಿನಂತೆ ಸ್ಪಷ್ಟನೆ ನೀಡಿರುವ ಶಾಸಕ ಚಂದ್ರಪ್ಪ ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದೆನೆ . ನಾನು ಜನರು ಸಾಯಬೇಕು ಎಂದು ಬಯಸುವುದಿಲ್ಲ. ಅಧಿಕಾರಿಗಳು 10 ಹಾಸಿಗೆಯುಳ್ಳ ಆಕ್ಸಿಜನ್ ಬೆಡ್ ನ ಆಸ್ಪತ್ರೆಯ ವ್ಯವಸ್ಥೆಯನ್ನು ನೀಡಿದರೆ 11 ಮತ್ತು 12 ನೆ ಸೋಂಕಿತರು ಬಂದಾಗ ಅವರು ಸಾಯಬೇಕಾ ಎಂದು ಅಧಿಕಾರಿಗಳಿಗೆ ಪ್ರಶ್ಬಿಸಿದ್ದೆನೆ. ನಾನು 20 ನಿಮಿಷಗಳ ಮಾತು ಆಡಿದ್ದೆನೆ. ಅದನ್ನು ಕೇಳಿ ಕ್ಷೇತ್ರದಲ್ಲಿ ಏನಾದರೂ ನಡೆದರೆ ನಾನು ಉತ್ತರ ಕೊಡಬೇಕಾಗುತ್ತದೆ ಆದ್ದರಿಂದ ಈ ರೀತಿ ಹೇಳಿದ್ದೆನೆ ಎಂದು ಶಾಸಕ ಚಂದ್ರಪ್ಪ ಹೇಳಿದರು.
ಸಂಯುಕ್ತವಾಣಿ