ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರ ನಿವಾಸದ ಮೇಲಿನ ಐಟಿ ದಾಳಿಯು ಮುಂದುವರೆದಿದೆ. ಚಿತ್ರದುರ್ಗ, ಬೆಂಗಳೂರು ಹಾಗೂ ದಾವಣಗೆರೆ ಐಟಿ ಅಧಿಕಾರಿಗಳು ಹಿರಿಯೂ ರಿನ ಗೊಲ್ಲಹಳ್ಳಿ ಯಲ್ಲಿ ರುವ ರವೀಂದ್ರಪ್ಪ ಅವರ ಸಂಬಂಧಿ ನಾಗರಾಜ್ ಮನೆ ಮೇಲೂ ತಡ ರಾತ್ರಿ ದಾಳಿಯನ್ನು ನಡೆಸಿದ್ದಾರೆ.
ಹೀಗೆ ಮುಂಗುಸುವಳ್ಳಿ ಮತ್ರು ಗೊಲ್ಲಹಳ್ಳಿ ಎರಡೂ ಕಡೆಯಲ್ಲೂ ಕೂಡ ಐಟಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದು, ಎರಡೂ ಕಡೆಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.