ರಾಂಪುರ ಆಸ್ಪತ್ರೆಗೆ ದಿಢೀರ್ ಭೇಟಿ‌ ನೀಡಿ ಪರಿಶೀಲಿಸಿದ ಸಿಇಓ ದಿವಾಕರ್

ಜಿಲ್ಲಾ ಸುದ್ದಿ

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನ ರಾಂಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸಿಇಓ ಎಂ.ಎಸ್. ದಿವಾಕರ್ ದಿಢೀರ್ ಭೇಟಿ‌ ನೀಡಿದರು.

 

 

 

ಭೇಟಿ ನೀಡಿದ ಸಿಇಓ ದಿವಾಕರ್ ಅವರು,ಆಸ್ಪತ್ರೆಯ ವೈದ್ಯಾಧಿಕಾರಿಗಳು, ರೋಗಿಗಳ ಜೊತೆ ಮಾತನಾಡಿ ಸಮಸ್ಯೆ ಗಳನ್ನು ಆಲಿಸಿದರು,

ನವಜಾತ ಶಿಶು ಹಾಗೂ ಗರ್ಭಿಣಿ ಸ್ತ್ರೀಯರ ಹಾರೈಕೆ ಮತ್ತು ಆರೋಗ್ಯ ಔಷಧೋಪಚಾರಗಳ ಬಗ್ಗೆ ವಿಚಾರಿಸಿ, ನೇರವಾಗಿ ರೋಗಿಗಳ ಬಳಿ ಹೋಗಿ ಕೆಲ ಅವರ ಆರೋಗ್ಯ ವಿಚಾರಿಸಿದರು. ಕೆಲ ರೋಗಿಗಳ ಬಿ ಪಿ ಚೆಕ್ ಮಾಡಿದರು.ನವಜಾತ ಶಿಶುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದರು. ಔಷಧಗಳ ಹಾಗೆ ದಾಸ್ತಾನು ಕೊಠಡಿಗಳಿಗೆ ಔಷಧಿ ಕೊಠಡಿಗಳಿಗೆ ರೋಗಿಗಳ ಕೊಠಡಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ಔಷಧಗಳ ಕೊರತೆಯೇನಾದರೂ ಇದೆಯಾ ಎಂದು‌ ವಿಚಾರಿಸಿದರು. ಆಸ್ಪತ್ರೆಯ ಮೂಲ ಸೌಕರ್ಯಗಳ ಬಗ್ಗೆ, ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ದಿನಕ್ಕೆ ಸುಮಾರು 250 ರಿಂದ 300 ಹೊರ ರೋಗಿಗಳು ಬಂದು ಹೋಗುತ್ತಾರೆ. ಒಂದು ತಿಂಗಳಿಗೆ 8 ರಿಂದ 10 ಬಾಣಂತಿಯರಿಗೆ ಇಲ್ಲಿ ಹೆರಿಗೆ ಮಾಡಿ ಹಾರೈಕೆ ಮಾಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ‌ ನೀಡಿದರು.ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *