ಚಿತ್ರದುರ್ಗ: ದಿವಂಗತ ಜಯಣ್ಣ ಹಾಗೂ ಮುರುಘಾ ರಾಜೇಂದ್ರ ಒಡೆಯರ್ ಅವರುಗಳ ಭದ್ರಾ ಮೇಲ್ದಂಡೆ ಯೋಜನೆಯ ನೀರಾವರಿ ಹೋರಾಟದಲ್ಲಿ ಅವರ ಪಾತ್ರ ಅವಿಸ್ಮರಣೀಯ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೋರಾಟಗಳನ್ನು ಸ್ಮರಿಸಿದರು.
ಅವರು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಸಂಯೋಜಿಸಿದ್ದ ಜಯಣ್ಣ ಹಾಗೂ ಮುರುಘಾ ರಾಜೇಂದ್ರ ಓಡೆಯರ್ ಅವರಿಗೆ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಲಿತ ಸಂಘರ್ಷ ಸಮಿತಿಯಲ್ಲಿದ್ದಾಗ ಹೋರಾಟದ ಜೀವನ ಆರಂಭಿಸಿದ ಜಯಣ್ಣ ನೀರಾವರಿ ಹೋರಾಟ ಸಮಿತಿಯಲ್ಲೂ ಕೂಡ ಪಾಲ್ಗೊಂಡು ಅಧ್ಯಕ್ಷರಾಗಿಯೂ ಸರ್ಕಾರದ ಗಮನ ಸೆಳದಿದ್ದರು. ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ಇವರ ಶ್ರಮ ಸಾಕಷ್ಟಿದೆ. ಇವರ ಜೊತೆಗೆ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಜೊತೆಯಾಗಿ ನಿಂತವರು ಮುರುಘ ರಾಜೇಂದ್ರ ಓಡೆಯರ್ ಎಂದು ಜಯಣ್ಣ ಹಾಗೂ ಓಡೆಯರ್ ಅವರ ಹೋರಾಟದ ದಿನಗಳನ್ನು ಸ್ಮರಿಸಿದರು.
ಸಂಯುಕ್ತವಾಣಿ