Chitradurga mansina ase bicchitta renuka

ಮನಸ್ಸಿನ ಆಸೆ ಬಿಚ್ಚಿಟ್ಟ ರೇಣುಕಾಚಾರ್ಯ

ರಾಜಕೀಯ

ದಾವಣಗೆರೆ: ರಾಜಕೀಯವಾಗಿ ನಾವ್ಯಾರು ಸನ್ಯಾಸಿಗಳಲ್ಲ, ಪ್ರಾದೇಶಿಕ ಅಸತೋಲನದ  ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

 

 

 

Chitradurga mansina ase bicchitta renukaದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಚಿವ ಸಂಪುಟದ ವಿಸ್ತರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರ  ಸಭೆಯನ್ನು ಮಾಡಲಾಗಿದೆ. ಆ ಮೂಲಕ ಸಿಎಂಗೆ  ದಾವಣಗೆರೆಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದೆವೆ.  ಬ್ಯಾಂಡ್ ಬಾರಿಸಿ ತಮಟೆ ಬಡಿದು ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ.  ಇದಕ್ಕಾಗಿ ಹಾದಿ ರಂಪ ಬೀದಿ ರಂಪನೂ ಮಾಡೋಲ್ಲ.
ರಾಜಕೀಯವಾಗಿ ನಾವು ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಸಚಿವ ಸ್ಥಾನ ಬೇಕು ಎಂದು ಕೇಳಿದ್ದೆವೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆನೆ. ಜನರ ಆಸೆ ಕೂಡ ನಾನು ಸಚಿವನಾಗಬೇಕು ಅನ್ನೋದಾಗಿದೆ ಎಂದು, ನಾನೂ ಕೂಡ ಸಚಿವ ಸ್ಥಾನದ ಅಕಾಂಕ್ಷಿ ಎಂದು ಮನಸ್ಸಿನ ಆಸೆಯನ್ನು ಎಂಪಿ ರೇಣುಕಾಚಾರ್ಯ ಬಿಚ್ಚಿಟ್ಟಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *