ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಡ್ಯಾಮೇಜ್ ಕಂಟ್ರೋಲ್ ಮಾಡಲು ಜಾರಕಿ ಹೊಳಿ ಬೆಳಗಾವಿಯ ನ್ಯಾಯಾಲಯದಲ್ಲಿ ದಿನೇಶ್ ಕಲ್ಲಹಳ್ಳಿ ವಿರುದ್ದ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿ ಹೊಳಿ ಸಚಿವ ಸ್ಥಾನವನ್ನು ಹೊಂದಿದ್ಸರು. ಇದೀಗ ಸಿಡಿ ಪ್ರಕರಣದಿಂದಾಗಿ ಬೆಳಗಾವಿಯ ಸಾಹುಕಾರ್ ಗೆ ಸಿಕ್ಕಾಪಟ್ಟೆ ಡ್ಯಾಮೇಜ್ ಆಗಿದೆ ಇದನ್ನು ಸರಿತೂಗಿಸಲು ಹಾಗೂ ನಾನವನಲ್ಲ ಎಂದು ಹೇಳಲು ಬೆಳಗಾವಿಯ ನ್ಯಾಯಲಯದಲ್ಲಿ ದಿನೇಶ್ ಕಲ್ಲಹಳ್ಳಿ ವಿರುದ್ಧ ನೂರು ಕೋಟಿಗೆ ಮಾನ ನಷ್ಟ ಮೊಕದ್ದಮೆಯನ್ನು ಹೂಡಲಿದ್ದಾರೆ.
ಇದರ ಬಗ್ಗೆ ವಕೀಲರ ಜೊತೆಯೂ ಚರ್ಚೆ ಮಾಡಿದ್ದಾರೆ. ಮಾನ ನಷ್ಟ ಮೊಕದ್ದಮೆ ಹೂಡಲು 52 ಲಕ್ಷ ಹಣವನ್ನು ಕೂಡ ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ. ಇದೆಲ್ಲದರ ಜವಾಬ್ದಾರಿಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿ ಹೆಗಲಿಗೆ ನೀಡಿದ್ದಾರೆ.
ಸಂಯುಕ್ತವಾಣಿ