ಚಿತ್ರದುರ್ಗ: ತೆಲುಗು ನಟ ವಿಜಯ ರಂಗರಾಜು ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರಾಡಿರುವ ಮಾತುಗಳನ್ನು ವಾಪಸ್ಸು ಪಡೆದು ಕ್ಷಮೆ ಕೇಳಬೇಕು ಎಂದು ಕನ್ನಡ ಚಿತ್ರ ರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ.
ಒಬ್ಬ ಕಲಾವಿದನಿಗೆ ಇನ್ನೊಬ್ಬ ಕಲಾವಿದರನ್ನು ಗೌರವಿಸುವ ಭಾವನೆ ಇರಬೇಕು ಗೌರವ ಪ್ರೀತಿ ಇರಬೇಕು.
ಯಾವುದೇ ಭಾಷೆಯ ನಟರಾದರೇನು ?
ಭಾರತೀಯ ಚಿತ್ರ ರಂಗ ನಮ್ಮಮನೆ ಕಲೆಗೆ ಕಲಾವಿದರಿಗೆ ಗೌರವಿಸಬೇಕು ಎಂದು ಪವರ್ ಸ್ಟಾರ್ ಹೇಳಿದ್ದಾರೆ.
ಸಂಯುಕ್ತವಾಣಿ