ಇಳಕಲ್ ಬಳಿ ಅಪಘಾತ ಗಾಣಿಗ ಗುರುಪೀಠದ ಬಸವ ಪ್ರಭು ಸ್ವಾಮೀಜಿಗೆ ತೀವ್ರ ಗಾಯ

ಜಿಲ್ಲಾ ಸುದ್ದಿ

ಇಳಕಲ್ ಬಳಿ ವಿ ಆರ್ ಎಲ್ ಬಸ್ ಅಪಘಾತ ಸಂಭವಿಸಿದ್ದು ಚಿತ್ರದುರ್ಗದ ಗಾಣಿಗ ಗುರುಪೀಠದ ಅಧ್ಯಕ್ಷರಾದ ಬಸವಪ್ರಭು ಸ್ವಾಮೀಜಿಗೆ ಅವರಿಗೆ ತೀವ್ರಸ್ವರೂಪದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

 

 

 

ಚಿತ್ರದುರ್ಗ ದ ಗಾಣಿಗ ಗುರುಪೀಠದ ಅಧ್ಯಕ್ಷರೂ ಸಮಾಜದ ಗುರುಗಳೂ ಆಗಿರುವ ಶ್ರೀ ಬಸವ ಪ್ರಭುಗಳು ಕಾರ್ಯಕ್ರಮದ ನಿಮಿತ್ತ ಇಳಕಲ್ ಗೆ ತೆರಳಿದ್ದು, ವಾಪಾಸ್ ಬಸ್ಸಿನಲ್ಲಿ ಬರುವಾಗ ಚಾಲಕನ ಅಜಾಗರೂತೆಯಿಂದಾಗಿ ಅಪಘಾತ ಸಂಭವಿಸಿದೆ. ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ವಾಮೀಜಿಯವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸ್ವಾಮೀಜಿ ಅವರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ‌ ಸ್ವಾಮೀಜಿಯವರನ್ನು ಕೂಡಲೇ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು‌ ಬಂದಿದೆ. ಈ ಸಮಯದಲ್ಲಿ ಶ್ರೀ ವೇಮನ ಸ್ವಾಮೀಜಿ, ಮುರುಘಾ ಮಠದ ಆಡಳಿತಾಧಿಕಾರಿ ಎಸ್‌ ಕೆ ಬಸವರಾಜನ್, ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಇದ್ದರು

Leave a Reply

Your email address will not be published. Required fields are marked *