ಮನೆ ನಿವೇಶನದ ಖಾತೆ ಮಾಡಿಕೊಡಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಹುಲ್ಲೂರು ಪಂಚಾಯಿತಿಯ ಮಹಿಳಾ ಪಿಡಿಓ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕಳೆದ ಒಂದುವರೆ ವರ್ಷದಿಂದ ಕುರುಬರಹಳ್ಳಿ ಮೂರು ಜನ ಸಹೋದರರಾದ ಸಲ್ಮಾನ್ ಖಾನ್, ಫೈರೋಜ್ ಖಾನ್ ಮತ್ತು ಇಮ್ರಾನ್ ಖಾನ್ ಇವರುಗಳು ನಿವೇಶನದ ಖಾತೆಯನ್ನು ಮಾಡಿಕೊಡುವಂತೆ ಓಡಾಡಿದ್ದು, ಕೊನೆಗೆ ಮಹಿಳಾ ಪಿಡಿಓ ಉಮಾ ಎನ್ನುವವರನ್ನು ವಿಳಂಬಕ್ಕೆ ಪ್ರಶ್ನಿಸಿದ್ದಾರೆ. ಮಾತಿಗೆ ಮಾತು ಬೆಳೆದು ಕುರ್ಚಿಯಿಂದ ಹೊಡೆಯಲು ಯತ್ನಿಸಿ ಕೈ ಹಿಡಿದು ಎಳೆದಾಡಿದ್ದಾರೆ ಎಂದು ಪಿಡಿಓ ಉಮಾ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೋಲಿಸರು ಹಲ್ಲೆಕೋರರಿಗಾಗಿ ಶೋಧ ನಡೆಸಿದ್ದಾರೆ.