ಚಿತ್ರದುರ್ಗ: ಮಾಜಿ ಲವರ್ ನೊಬ್ಬ ಮನೆಗೆ ನುಗ್ಗಿ ಈಗಾಗಲೇ ಮದುವೆಯಾಗಿ ತವರು ಮನೆಗೆ ಬಂದಿದ್ದ ಮಹಿಳೆಯನ್ನು ಅಪಹರಣ ಮಾಡಲು ಯತ್ನಿಸಿದ್ದರಿಂದ ಅರೋಪಿ ಪ್ರತಾಪ್ ಹಾಗು ಸ್ನೇಹಿತನನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿರುವ ಫೊಟೋಗಳು ವೈರಲ್ ಆಗಿದೆ.
ಚಳ್ಳಕೆರೆ ತಾಲೂಕು ಹೊಸ ಮುಚ್ಚುಗುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರತಾಪ್ ಮಹಿಳೆಯನ್ನುಅವಳ ಮದುವೆಗೂ ಮುನ್ನ ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಮನೆಗೆ ನುಗ್ಗಿ ಅವಳನ್ನು ಅಪಹರಣ ಮಾಡಲು ಅವನು ಸ್ನೇಹಿತರ ಜೊತೆಗೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಹೀಗೆ ಬಂದ ಯುವಕ ಪ್ರತಾಪ್ ಹಾಗೂ ಅವನ ಸ್ನೇಹಿತನನ್ನು ಮನೆಯವರು ಹಾಗೂ ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದು ವೈರಲ್ ಆಗಿದೆ.
ಚಿಕ್ಕಮ್ಮನಹಳ್ಳಿಯ ಪ್ರತಾಪ್ ಹಾಗೂ ಮೂವರ ಮೇಲೆ ಮಹಿಳೆಯ ಸಂಬಂಧಿ ಯಶೋಧಮ್ಮ ಚಳ್ಳಕೆರೆ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಅಪಹರಣಕ್ಕೆ ಯತ್ನಿಸಿದ್ದ ಮೂವರನ್ನು ಕರೆ ತಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಂಯುಕ್ತವಾಣಿ