ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾದ ಮುರುಘಾ ಶರಣರು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿತರಾಗಿ ಜಾಮೀನು ಪಡೆದಿದ್ದ ಶರಣರು, ಇಂದು ಸುಪ್ರೀಂಕೋರ್ಟ್ ಆದೇಶದಂತೆ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರ ಮುಂದೆ ಶರಣಾದರು. ಮುರುಘಾ ಶರಣರಿಗೆ ಹೈ ಕೋರ್ಟ್ ಪೋಕ್ಸೋ ಕಾಯ್ದೆಯಡಿ
ಒಂದು ವರೆ ವರ್ಷಗಳ ಬಳಿಕ ಅವರಿಗೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಆ ಜಾಮೀನನ್ನು ರದ್ದು ಮಾಡಿ ಮುರುಘಾ ಶರಣರು ನ್ಯಾಯಾಲಕ್ಕೆ ಶರಣಾಗಲು ಆದೇಶಿಸಿತ್ತು. ಆದರಂತೆ ಇಂದು ಮುರುಘಾ ಶರಣರು ದಾವಣಗೆರೆಯ ವಿರಕ್ತ ಮಠದಿಂದ ನೇರವಾಗಿ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ. ನ್ಯಾಯಾಧೀಶರ ವಿಚಾರಣೆ ನಂತರ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ತಪಾಸಣೆ ನೆಡೆಸಿ ಪುನಃ ಅವರನ್ನು ಜಿಲ್ಲಾಕಾರಾಗೃಹಕ್ಕೆ ಬಿಡಲಾಗುವುದು ಎಂದು ಮೂಲಗಳು ತಿಳಿಸಿವೆ.